ಅಕ್ರಮ ಗಣಿಗಾರಿಕೆ ನಿಲ್ಲಿಸಲು ಹೊರಟ ಪೊಲೀಸ್ ಅಧಿಕಾರಿಯನ್ನು ಲಾರಿ ಹರಿಸಿ ಕೊಲೆ: ಕಸದ ತೊಟ್ಟಿಯಲ್ಲಿ ಮೃತದೇಹ ಪತ್ತೆ
ಹರ್ಯಾಣ: ಇಲ್ಲಿನ ನುಹ್ ನ ಪಂಚಗಾಂವ್ ಬಳಿ ಅಕ್ರಮ ಗಣಿಗಾರಿಕೆಯ ಸ್ಥಳಕ್ಕೆ ತೆರಳಿದ್ದ ಪೊಲೀಸ್ ಅಧಿಕಾರಿಯನ್ನು ಕೊಲೆಗೈಯಲಾಗಿದೆ ಎಂದು ತಿಳಿದು ಬಂದಿದೆ. ತೌರು ಡಿಎಸ್ಪಿ ಸುರೇಂದ್ರ ಸಿಂಗ್ ಟ್ರಕ್ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಅವರ ಮೃತದೇಹವು ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ ಎಂದು indiatoday.in ವರದಿ ಮಾಡಿದೆ.
ಮಾಹಿತಿ ದೊರೆತ ಪ್ರಕಾರ ಡಿಎಸ್ಪಿ ಸುರೇಂದ್ರ ಕುಮಾರ್ ಬಿಷ್ಣೋಯ್ ಅವರು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ತೌಡು ಬೆಟ್ಟದಲ್ಲಿ ದಾಳಿ ನಡೆಸಲು ತೆರಳಿದ್ದರು. ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದಂತೆ, ಡಿಎಸ್ಪಿ ತಮ್ಮ ಅಧಿಕೃತ ವಾಹನದ ಬಳಿ ನಿಂತಿದ್ದರು. ಗಣಿಗಾರಿಕೆ ವಾಹನವನ್ನು ಅವರು ತಡೆಯಲೆತ್ನಿಸಿದಾಗ ಚಾಲಕನು ಪೊಲೀಸರ ಮೇಲೆಯೇ ಲಾರಿ ಹರಿಸಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
Haryana | Tawadu (Mewat) DSP Surendra Singh Bishnoi, who had gone to investigate an instance of illegal mining in Nuh, died after being run over by a dumper driver. Search operation is underway to apprehend the accused. Details awaited: Nuh Police pic.twitter.com/Q1xjdUPWE2
— ANI (@ANI) July 19, 2022