ರಾಜಸ್ಥಾನ: ಅಧ್ಯಾಪಕನ ಥಳಿತದಿಂದ ಗಾಯಗೊಂಡ ದಲಿತ ಬಾಲಕ ಆಸ್ಪತ್ರೆಗೆ ದಾಖಲು
ಸಾಂದರ್ಭಿಕ ಚಿತ್ರ
ಬರ್ಮೇರ್, ಆ. 24: ಅಧ್ಯಾಪಕನ ಥಳಿತದಿಂದ ಗಾಯಗೊಂಡ ದಲಿತ ಬಾಲಕನೋರ್ವ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ರಾಜಸ್ಥಾನದ ಬರ್ಮೇರ್ನಲ್ಲಿ ನಡೆದಿದೆ.
7ನೆ ತರಗತಿ ವಿದ್ಯಾರ್ಥಿಯಾಗಿರುವ ಬಾಲಕ ಪರೀಕ್ಷೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ಬರೆದಿಲಿಲ್ಲ. ಈ ಹಿನ್ನೆಲೆಯಲ್ಲಿ ಅದ್ಯಾಪಕರು ಆತನಿಗೆ ಥಳಿಸಿದ್ದರು. ಆತನ ಗೂಡೆಯತ್ತ ದೂಡಿದ್ದರು ಎಂದು ಅದೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕನ ಸಹೋದರ ತಿಳಿಸಿದ್ದಾನೆ.
ಇದರಿಂದ ತಲೆಗೆ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದ ಬಾಲಕನನ್ನು ಮನೆಗೆ ಕರೆದೊಯ್ಯಲಾಯಿತು. ಅನಂತರ ಪಾಲಕರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಅಧ್ಯಾಪಕ ಅಶೋಕ್ ಮಾಲಿಯನ್ನು ಬಂಧಿಸಲಾಗಿದೆ ಹಾಗೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘‘ನಾವು ತರಗತಿಯಲ್ಲಿ ಪರೀಕ್ಷೆ ನಡೆಸುತ್ತಿರುವ ಸಂದರ್ಭ ಬಾಲಕನೋರ್ವ ಓಡಿ ಬಂದು ತನ್ನ ಸಹೋದರಿನಿಗೆ ಅದ್ಯಾಪಕರು ಹೊಡೆದಿದ್ದಾರೆ ಎಂದು ತಿಳಿಸಿದ. ಅಲ್ಲದೆ, ತನ್ನೊಂದಿಗೆ ಬರುವಂತೆ ಆತ ವಿನಂತಿಸಿದ’’ ಎಂದು ಅಧ್ಯಾಪಕಿಯೋರ್ವರು ತಿಳಿಸಿದ್ದಾರೆ.
‘‘ನಾನು ಬಾಲಕನನ್ನು ನನ್ನೊಂದಿಗೆ ಕರೆದುಕೊಂಡು ಬಂದೆ. ಆತನಿಗೆ ನೀರು ಹಾಗೂ ಆಹಾರ ನೀಡಿದೆ. ಆತನ ಸಹೋದರ ಮಾತ್ರೆ ತಂದು ನೀಡಿದ. ನಾನು ಔಷಧದ ಕುರಿತು ಆತನಲ್ಲಿ ವಿಚಾರಿಸಿದೆ ಹಾಗೂ ಆತನ ಕುಟುಂಬಕ್ಕೆ ದೂರವಾಣಿ ಕರೆ ಮಾಡಿದೆ. ಆದರೆ, ಅವರು ಕರೆ ಸ್ವೀಕರಿಸಲಿಲ್ಲ. ಕೂಡಲೇ ಬಾಲಕ ಸಹೋದರನೊಂದಿಗೆ ಮನೆಗೆ ತೆರಳಿದ’’ ಎಂದು ಅವರು ಹೇಳಿದ್ದಾರೆ.
ಬಾಲಕನನ್ನು ಇಲ್ಲಿಗೆ ಕರೆದುಕೊಂಡ ಬಳಿಕ ಹೊಟ್ಟೆ ನೋವಿನ ಬಗ್ಗೆ ಆತ ತಿಳಿಸಿದ. ಈಗ ಆತನ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯ ಡಾ. ದಿಲೀಪ್ ಚೌಧರಿ ಹೇಳಿದ್ದಾರೆ. ಘಟನೆಯ ಕುರಿತು ಮಾಹಿತಿ ಸ್ವೀಕರಿಸಿದ ಕೂಡಲೇ ಪೊಲೀಸರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ತನಿಖೆ ಆರಂಭಿಸಲಿದ್ದಾರೆ.