ಎಮ್ಮೆಗಳ ಹಿಂಡಿಗೆ ಢಿಕ್ಕಿ ಹೊಡೆದ ಸೆಮಿ ಹೈಸ್ಪೀಡ್ ‘ವಂದೇ ಭಾರತ್’ ರೈಲು
Photo: NDTV
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೇ ದಿನಗಳ ಹಿಂದೆ ತಮ್ಮ ರಾಜ್ಯದಲ್ಲಿ ಚಾಲನೆ ನೀಡಿದ್ದ ಸೆಮಿ ಹೈಸ್ಪೀಡ್ ‘ವಂದೇ ಭಾರತ್’ ರೈಲು ಗುಜರಾತ್ನಲ್ಲಿ ಇಂದು ಬೆಳಗ್ಗೆ ಎಮ್ಮೆಗಳ ಹಿಂಡಿಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ಪರಿಣಾಮ 'ವಂದೇ ಭಾರತ್' ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ.
ರೈಲು ಮುಂಬೈನಿಂದ ಗಾಂಧಿನಗರಕ್ಕೆ ತೆರಳುತ್ತಿತ್ತು. ಅಹಮದಾಬಾದ್ ಗಿಂತ ಮೊದಲು ಬಟ್ವಾ ಮತ್ತು ಮಣಿನಗರ ನಡುವೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ರೈಲಿನ ಮುಂಭಾಗಕ್ಕೆ ಸಣ್ಣಪುಟ್ಟ ಹಾನಿಯಾಗಿದೆ. ಘಟನೆಯ ನಂತರ ಕೆಲಸಗಾರ ಇಂಜಿನ್ನ ಮುಂಭಾಗದ ಹಾನಿಯಾದ ಭಾಗವನ್ನು ತೆಗೆದುಹಾಕುವುದು ವೀಡಿಯೊ ಕಂಡುಬಂದಿದೆ.
ಹಳಿಗಳನ್ನು ತೆರವುಗೊಳಿಸಿದ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರೆಸಿತು.
ಪ್ರಧಾನಿ ಮೋದಿ ಅವರು ಕಳೆದ ತಿಂಗಳು ಗಾಂಧಿನಗರ-ಮುಂಬೈ 'ವಂದೇ ಭಾರತ್' ಎಕ್ಸ್ಪ್ರೆಸ್ ಸೆಮಿ ಹೈಸ್ಪೀಡ್ ರೈಲಿಗೆ ಚಾಲನೆ ನೀಡಿದ್ದರು. ಆ ನಂತರ ಗಾಂಧಿನಗರದಿಂದ ಅಹಮದಾಬಾದ್ನ ಕಲುಪುರ್ ರೈಲು ನಿಲ್ದಾಣದವರೆಗೆ ಪ್ರಯಾಣಿಸಿದ್ದರು.
Cattle runover damages semi high-speed Mumbai-Ahmedabad #VandeBharat Express between Vaitarna and Maninagar around 11:18am this morning. @mid_day pic.twitter.com/JpKpFdaeky
— Rajendra B. Aklekar (@rajtoday) October 6, 2022