ಮದ್ಯ ನೀತಿ ಪ್ರಕರಣ: ಸಿಬಿಐ ಕಚೇರಿಗೆ ಹಾಜರಾದ ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ
ನಾನು ಗುಜರಾತ್ ಚುನಾವಣೆ ಪ್ರಚಾರಕ್ಕೆ ತೆರಳದಂತೆ ತಡೆಯುವುದು ಬಿಜೆಪಿಯ ಯೋಜನೆ
ಮನೀಶ್ ಸಿಸೋಡಿಯಾ, Photo: twitter
ಹೊಸದಿಲ್ಲಿ: ಮುಂಬರುವ ಗುಜರಾತ್ ಚುನಾವಣೆಯ ಪ್ರಚಾರದಿಂದ ತನ್ನನ್ನು ತಡೆಯುವ ಬಿಜೆಪಿ "ಯೋಜನೆ"ಯ ಭಾಗವಾಗಿ ಇಂದು ತನ್ನ ಬಂಧನವಾಗಲಿದೆ ಎಂದು ಭವಿಷ್ಯ ನುಡಿದಿರುವ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ Manish Sisodia ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣೆಗಾಗಿ ಸಿಬಿಐ ಕೇಂದ್ರ ಕಚೇರಿಗೆ ಆಗಮಿಸಿದ್ದಾರೆ.
ಸಿಸೋಡಿಯಾ ಅವರು ಮೊದಲು ರೋಡ್ಶೋ ನಡೆಸಿದರು. ಸಿಬಿಐ ಕಚೇರಿಗೆ ಹೋಗುವ ಮಾರ್ಗದಲ್ಲಿ ಮಹಾತ್ಮ ಗಾಂಧಿಯವರ ಸ್ಮಾರಕ ರಾಜ್ ಘಾಟ್ ಸೇರಿದಂತೆ ಹಲವಡೆ ತೆರಳಿದರು.ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
"ಮುಂದಿನ ದಿನಗಳಲ್ಲಿ ನಾನು ಚುನಾವಣಾ ಪ್ರಚಾರಕ್ಕಾಗಿ ಗುಜರಾತ್ಗೆ ಹೋಗಬೇಕಿತ್ತು. ನಾನು ಗುಜರಾತ್ಗೆ ಹೋಗದಂತೆ ತಡೆಯುವುದು ಅವರ ಉದ್ದೇಶವಾಗಿದೆ" ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ‘ಗುಜರಾತ್ನಲ್ಲಿ ಬಿಜೆಪಿಗೆ ಸೋಲುವುದು ಗೊತ್ತಿರುವುದರಿಂದಲೇ ಭಯಗೊಂಡಿದೆ’ ಎಂದು ಸರಣಿ ಟ್ವೀಟ್ಗಳಲ್ಲಿ ಹೇಳಿದ್ದಾರೆ.
ಸಿಬಿಐ ಕಚೇರಿಗೆ ಹೊರಡುವ ಮೊದಲು ಆಶೀರ್ವಾದ ಪಡೆಯಲು ಸಿಸೋಡಿಯಾ ತಮ್ಮ ತಾಯಿಯ ಪಾದಗಳನ್ನು ಸ್ಪರ್ಶಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪಕ್ಷದ ಸಂಸದ ಸಂಜಯ್ ಸಿಂಗ್ ಹಾಗೂ ಶಾಸಕರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಸೇರಿದಂತೆ ಹಲವು ಎಎಪಿ ನಾಯಕರು ಅವರ ಮನೆಯಲ್ಲಿ ಉಪಸ್ಥಿತರಿದ್ದರು.
जब जब मैं गुजरात गया, मैंने गुजरात के लोगों को यही कहा कि हम गुजरात में भी आपके बच्चों के लिए दिल्ली जैसे शानदार स्कूल बनायेंगे। लोग बहुत खुश हैं। लेकिन ये लोग नहीं चाहते कि गुजरात में भी अच्छे स्कूल बनें, गुजरात के लोग भी पढ़ें और तरक़्क़ी करें।
— Manish Sisodia (@msisodia) October 17, 2022