ಪ.ಬಂಗಾಳ: ದುಷ್ಕರ್ಮಿಗಳಿಂದ ಬಾಂಬ್, ಗುಂಡಿನ ದಾಳಿಗೆ ಟಿಎಂಸಿ ನಾಯಕ ಬಲಿ
ಬಹರಾಮ್ಪುರ (ಪ.ಬಂ),ಮೇ 13: ಮುರ್ಶಿದಾಬಾದ್ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಬಾಂಬ್ ಹಾಗೂ ಗುಂಡಿನ ದಾಳಿ ನಡೆಸಿ ತೃಣಮೂಲ ಕಾಂಗ್ರೆಸ್ ನಾಯಕ ಅಸಾದುಲ್ ಶೇಖ್ ಅವರನ್ನು ಹತ್ಯೆಗೈದಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬೆಹ್ರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಖುರಿ ಎಂಬಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ನಾಯಕ ಹಾಗೂ ಮುರ್ಶಿದಾಬಾದ್ ಜಿಲ್ಲಾ ಪರಿಷತ್ನ ಮಾಜಿ ಅಧ್ಯಕ್ಷ ಶಿಲಾದಿತ್ಯ ಹಾಲ್ದರ್ ಬಂಧಿತರಲ್ಲೊಬ್ಬನೆಂದು ಮುರ್ಶಿದಾಬಾದ್ ಎಸ್ಪಿ ಎಸ್. ಮುಖೇಶ್ ತಿಳಿಸಿದ್ದಾರೆ. ದಮಕೋಲ್ ನಗರಸಭಾ ಚುನಾವಣೆಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ದ್ವೇಷದಿಂದ ನಡೆದ ಕೊಲೆ ಕೃತ್ಯ ಇದಾಗಿದೆಯೆದಂು ಪೊಲೀಸರು ಶಂಕಿಸಿದ್ದಾರೆ. ದಮ್ಕೋಲ್ ನಗರಸಭೆಗೆ ಮೇ 14ರಂದು ಚುನಾವಣೆ ನಡೆಯಲಿದೆ.
Next Story