ಆಮ್ಆದ್ಮಿ ಶಾಸಕನ ಗೂಂಡಾಗಿರಿ; ಸರಕಾರಿ ನೌಕರನಿಗೆ ಕಪಾಳಮೋಕ್ಷ
ಹೊಸದಿಲ್ಲಿ,ಜು.1: ದಿಲ್ಲಿಯ ರಿಟಾಲಾದಲ್ಲಿ ಆಮ್ ಆದ್ಮಿ ಪಾರ್ಟಿಯ ಶಾಸಕ ಮಹೇಂದ್ರ ಗೋಯಲ್ ದಿಲ್ಲಿ ಜಲಮಂಡಳಿಯ ಕಚೇರಿಯಲ್ಲಿ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಹೊಡೆದಾಟದ ಪೂರ್ತಿ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಅದರ ವೀಡಿಯೊ ಕೂಡಾ ವೈರಲ್ ಆಗಿದೆ. ಆದರೆ ಶಾಸಕ ಗೋಯಲ್ ಈ ವ್ಯಕ್ತಿ ಜಲಮಂಡಳಿಯ ನೌಕರನಲ್ಲ, ಬದಲಾಗಿ ದಲ್ಲಾಳಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಪ್ರಕರಣದ ಕುರಿತು ಸ್ಪಷ್ಟೀಕರಣ ನೀಡಿದ ಶಾಸಕ ಗೋಯಲ್ರು " ನಾನು ಹೊಡೆದಿಲ್ಲ. ಹೊಡೆದಾಟದ ಆರೋಪ ಸಂಪೂರ್ಣತಪ್ಪು. ನಾನು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದೇನೆಎಂದಿದ್ದಾರೆ. ಆದರೆ ವೈರಲ್ ಆಗಿರುವ ವೀಡಿಯೊದಲ್ಲಿಹೊಡೆದಾಡುವ ದೃಶ್ಯ ಸ್ಪಷ್ಟವಾಗಿ ಗೋಚರಿಸುತ್ತಿದೆ.
Next Story