ಕಾಳಾವರ ದಿನಕರ ಶೆಟ್ಟಿ
ಕುಂದಾಪುರ, ಡಿ.30: ಕುಂದಾಪುರ ತಾಲೂಕು ಪಂಚಾಯತ್ನ ಮಾಜಿ ಅಧ್ಯಕ್ಷ, ಪಿಎಲ್ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಪ್ರಗತಿಪರ ಕೃಷಿಕ ದಿನಕರ ಶೆಟ್ಟಿ ಕಾಳಾವರ (66) ಮಂಗಳವಾರ ನಿಧನರಾದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮಾಜಿ ಶಾಸಕರಾದ ಕಾಪು ಸಂಜೀವ ಶೆಟ್ಟಿ ಇವರ ಮಗನಾದ ದಿನಕರ ಶೆಟ್ಟಿ ಅವರು ಪ್ರಗತಿಪರ ಕೃಷಿಕರಾಗಿದ್ದು, ಚಿಕ್ಕು ಹಣ್ಣಿನ ಬೆಳೆಗೆ ಹೆಸರು ವಾಸಿ ಯಾಗಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಸಾ ಷ್ಟು ಜನಪರ ಕೆಲಸ ಮಾಡಿದ್ದರು.
Next Story