ಮಂಗಳೂರು : ಕುದ್ರೊಳಿ ನಡುಪಲ್ಲಿ ನಿವಾಸಿ ಎಂ.ಎಚ್. ನಿಸಾರ್ ಅಹ್ಮದ್ (55) ಅವರು ಹೃದಯಾಘಾತದಿಂದ ರವಿವಾರ ನಿಧನರಾಗಿದ್ದಾರೆ.
ಸಮಾಜ ಸೇವಕರಾಗಿದ್ದ ನಿಸಾರ್ ಅಹ್ಮದ್ ಅವರು ಈ ಹಿಂದೆ ಕೃಷ್ಣಾಪುರದಲ್ಲಿ ಬೇಕರಿ ನಡೆಸುತ್ತಿದ್ದರು.
ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.