ಉಡುಪಿ, ಮಾ.19: ಕಲ್ಯಾಣಪುರ ನಿವಾಸಿ, ಸಮಾಜ ಸೇವಕ ಸದಾನಂದ ಪೈ(74) ಇಂದು ಸ್ವಗೃಹದಲ್ಲಿ ನಿಧನರಾದರು.
ಸಿಂಡಿಕೇಟ್ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಇವರು, ಶ್ರೀವೆಂಕಟ ರಮಣ ದೇವಸ್ಥಾನದ ಮಂಡಳಿಯ ಸದಸ್ಯರಾಗಿ, ಜಿಎಸ್ಬಿ ಸಭಾ ಕಲ್ಯಾಣಪುರ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.