ಅಬ್ದುಲ್ಲತೀಫ್ ಮಡಿಕೇರಿ
ಮಡಿಕೇರಿ, ಎ.10: ಅನಿವಾಸಿ ಭಾರತೀಯರ ವೇದಿಕೆಯಾದ ಖತರ್ ಇಂಡಿಯನ್ ಸೋಶಿಯಲ್ ಫೋರಂ (QISF) ಕಾರ್ಯದರ್ಶಿ, ಅಬ್ದುಲ್ಲತೀಫ್ ಮಡಿಕೇರಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ಕಳೆದ 30 ವರ್ಷಗಳಿಂದ ಖತರ್ ನ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಬ್ದುಲ್ಲತೀಫ್ ಮಡಿಕೇರಿಯವರು ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂತಾಪ: ಅಬ್ದುಲ್ಲತೀಫ್ ಮಡಿಕೇರಿ ನಿಧನಕ್ಕೆ ಖತರ್ ಇಂಡಿಯನ್ ಸೋಶಿಯಲ್ ಫೋರಂ ತೀವ್ರ ಸಂತಾಪ ವ್ಯಕ್ತಪಡಿಸಿದೆ.
Next Story