ಶಂಕರ್ ಪೂಜಾರಿ
ಉಡುಪಿ, ಮೇ 18: ಮುಂಬೈಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಶಂಕರ್ ಪೂಜಾರಿ(77) ಅಲ್ಪಕಾಲದ ಅನಾರೋಗ್ಯದಿಂದ ಮೇ 16ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಬಂಟಕಲ್ ನಿವಾಸಿಯಾಗಿದ್ದ ಶಂಕರ್ ಪೂಜಾರಿ ಹಲವು ವರ್ಷ ಗಳಿಂದ ಮುಂಬೈಯ ಭಾಯಂದರ್ನಲ್ಲಿ ‘ಹೊಟೇಲ್ ವಿಜಯ್ ಪಂಜಾಬ್’ ನಡೆಸುತ್ತಿದ್ದರು.
ಮೃತರು ಪತ್ನಿ, ಉಡುಪಿಯ ನೇತ್ರತಜ್ಞ ಡಾ.ಪರೇಶ್ ಪೂಜಾರಿ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರ ರನ್ನು ಅಗಲಿದ್ದಾರೆ.
Next Story