ಬರೆಮೇಲು ಸುಬ್ರಹ್ಮಣ್ಯ ಭಟ್
ಬೆಳ್ಳಾರೆ ಗ್ರಾಮದ ನೆಟ್ಟಾರು ಮನೆತನದ ಬರೆಮೇಲು ಸುಬ್ರಹ್ಮಣ್ಯ ಭಟ್ ಎನ್. (64) ಮಂಗಳವಾರ ನಿಧನರಾದರು. ಇವರಿಗೆ ಕೋವಿಡ್ ಪಾಸಿಟಿವ್ ಇತ್ತೆನ್ನಲಾಗಿದೆ. ಇವರು 10 ದಿವಸಗಳ ಹಿಂದೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿಯರು ಹಾಗು ಬಂಧುಬಳಗವನ್ನು ಅಗಲಿದ್ದಾರೆ.
ಇವರು ನೆಟ್ಟಾರು ಶ್ರೀ ಶೀರಾಡಿ ದೈವಸ್ಥಾನದ ಮುಖ್ಯಸ್ಥರಾಗಿ, ಅಜಪಿಲ ಶ್ರೀ ಸದಾಶಿವ ವೇದಪಾಠ ಶಾಲೆ ಮತ್ತು ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿ, ನೆಟ್ಟಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
Next Story