ಶಂಕರ್ ಬಿ.
ಶಿರ್ವ, ಮೇ 31: ಮಜೂರು ಕರಂದಾಡಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮೂಲತಃ ಮೂಡುಬೆಳ್ಳೆ ತೋಕೋಳಿಯ ಶಂಕರ ಬಿ.(59) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಶಾಲೆಯಲ್ಲಿ 20ವರ್ಷಗಳ ಸೇವೆ ಸಲ್ಲಿಸಿ ಕರಂದಾಡಿ ಶಾಲೆಗೆ ವರ್ಗಾವಣೆ ಗೊಂಡಿದ್ದರು. ಭಾರತ ಸೇವಾ ದಳದ ಶಿಕ್ಷಕರಾಗಿದ್ದೂ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story