ಗಣೇಶ ಭಟ್ ಮಾಣಿತ್ತೋಡಿ
ಉಪ್ಪಳ: ಜ್ಯೋತಿಷಿ ಪೈವಳಿಕೆ ಸನಿಹದ ಮಣಿತ್ತೋಡಿ ಗಣೇಶ ಭಟ್ (67) ಮಂಡ್ಯದಲ್ಲಿ ಶುಕ್ರವಾರ ನಿಧನ ಹೊಂದಿದರು.
ಇವರು ಮಂಡ್ಯ ಜಿಲ್ಲೆಯ ಕೆ.ಎಂ ದೊಡ್ಡಿಯಲ್ಲಿ ತಮ್ಮ ಪತ್ನಿ, ಪುತ್ರನ ಜೊತೆ ಹಲವು ವರ್ಷಗಳಿಂದ ವಾಸವಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ. ನಾಲ್ಕು ದಶಕದಿಂದ ಹಿಂದೆ ಊರಿನಿಂದ ಮಂಡ್ಯಕ್ಕೆ ತೆರಳಿದ್ದ ಭಟ್ಟರು ಜ್ಯೋತಿಶಾಸ್ತ್ರದ ಮೂಲಕ ಮಂಡ್ಯದ ಜನತೆಗೆ ಚಿರ ಪರಿಚಿತರಾಗಿದ್ದರು.
ಜ್ಯೋತಿಷ್ಯದ ಜೊತೆಯಲ್ಲಿ ಜಲಮೂಲ ಹುಡುಕುವ ಡೌಸಿಂಗ್ ಪರಿಣತಿಯನ್ನು ಹೊಂದಿದ್ದರು. ಮೃತರು ಪತ್ನಿ, ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story