ಹಾಜಿ ಸೈಯದ್ ಅಬ್ದುಲ್ ಸತ್ತಾರ್
ಕಾರ್ಕಳ : ಕಾರ್ಕಳ ಹಂಚಿಕಟ್ಟಿ ನಿವಾಸಿ ಹಾಜಿ ಸೈಯದ್ ಅಬ್ದುಲ್ ಸತ್ತಾರ್ (86) ಮುಂಬೈಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಸುಮಾರು 55 ವರ್ಷದಿಂದ ಮುಂಬೈಯಲ್ಲಿ ಮೂಹಿ ಟ್ರೇಡಿಂಗ್ ಎಂಬ ರಫ್ತು ಸಂಸ್ಥೆಯನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಹಲವಾರು ಯುವಕರಿಗೆ ಉದ್ಯೋಗದಾತರಾಗಿದ್ದರು. 1982 ರಲ್ಲಿ ಕೇಂದ್ರ ಸರಕಾರದಿಂದ ಕೊಡಲ್ಪಡುವ ಅತ್ಯುತ್ತಮ ರಫ್ತುದಾರ ಪ್ರಶಸ್ತಿಯನ್ನು ಅಂದಿನ ವಿತ್ತ ಸಚಿವರಾದ ಪ್ರಣವ್ ಮುಖರ್ಜಿಯಿಂದ ಪಡೆದಿದ್ದರು.
ಮುಂಬೈ ವೆಲ್ಫೇರ್ ನಲ್ಲಿ ಸುಮಾರು ಮೂವತ್ತು ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ ಹಸ್ತ ನಿಡುತ್ತಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
Next Story