ಯಕ್ಷ ಕಲಾವಿದ ಆನಂದ ಕೂಡ್ಲು
ಉಡುಪಿ : ಹಿರಿಯ ಯಕ್ಷಗಾನ ಸ್ತ್ರೀ ವೇಷಧಾರಿ ಕೂಡ್ಲು ಆನಂದ (೭೬) ಜೂ.೧೬ರ ಗುರುವಾರ ಸಂಜೆ ಕಾಸರಗೋಡು ಕೂಡ್ಲಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಚಾರಿತ್ರಿಕ ಮಹತ್ವದ ಕೂಡ್ಲು ಮೇಳವೂ ಸೇರಿದಂತೆ ಹಲವು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಕಾವು ಕಣ್ಣರ ಗುರುತ್ವದಲ್ಲಿ ನಾಟ್ಯಾಭಿನಯ ಕಲಿತ ಅವರು ಕಾಸರಗೋಡು ಸುಬ್ರಾಯ ಹೊಳ್ಳರೇ ಮೊದಲಾದ ಶಿಷ್ಯರನ್ನು ಸಿದ್ಧಗೊಳಿಸಿದ್ದರು.
ಮೃತರು ಪತ್ನಿ ಹಾಗೂ ನಾಲ್ವರು ಪುತ್ರರನ್ನು ಅಗಲಿದ್ದಾರೆ.
Next Story