ಮಂಗಳೂರಿನ ಯೆಯ್ಯಾಡಿಯ ದೇವಿ ಪ್ರಸಾದ ನಿವಾಸಿ, ಬೆಳ್ಮಣ್ಣು ದಿ.ರಾಮಕೃಷ್ಣ ರಾವ್ ಅವರ ಪತ್ನಿ ದೇವಕಿ ಅಮ್ಮ (90) ಅಲ್ಪ ಕಾಲದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.
ಮೃತರಿಗೆ ಮಂಗಳೂರು ಯೆಯ್ಯಾಡಿಯ ಯುನಿಟಿ ಟೆಲಿಕಾಂ ಸಂಸ್ಥೆಯ ಮಾಲಕ ಬಿ.ರಾಘವೇಂದ್ರ ರಾವ್ ಸಹಿತ ಇಬ್ಬರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ.