-

ಒಳಮೀಸಲಾತಿ ಎಂಬುದು ಎಡ-ಬಲದ ಚರ್ಚೆ ಅಲ್ಲ...

-

ನಾನು ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದವನು. ಆದರೆ ನನ್ನ ಕೆಲಸ ಎಡಗೈ ಸಮುದಾಯ ಅಥವಾ ಮಾದಿಗರ ಪರವಾದ ನನ್ನ ಹೋರಾಟಗಳನ್ನು ಮಾಡುತ್ತಿದ್ದೇನೆ. ಪೌರ ಕಾರ್ಮಿಕರ ಹಕ್ಕುಗಳ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಈವರೆಗೆ ನನ್ನನ್ನು ಎಲ್ಲೂ ಯಾರೊಬ್ಬರೂ ಅವರ ಪರವಾಗಿ ಏಕೆ ಕೆಲಸ ಮಾಡುತ್ತಿದ್ದೀಯಾ..? ಅಥವಾ ನಾನು ಅವರ ಪರ ಏಕೆ ಕೆಲಸ ಮಾಡಬೇಕು ಎಂದು ಪ್ರಶ್ನಿಸಿಕೊಂಡಿಲ್ಲ. ಈ ಮೀಸಲಾತಿ-ಒಳಮೀಸಲಾತಿ ಎಂದಾಗಲೆಲ್ಲ ಎಡ-ಬಲದ ಚರ್ಚೆ ನಡೆಯುತ್ತವೆ. ಎಲ್ಲರೂ ಅನುಮಾನದಿಂದಲೇ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ- ರಾಜಕಾರಣದಾಚೆ ನಿಜವಾಗಿಯೂ ವಾಸ್ತವದಲ್ಲಿ ಹಾಗಿದೆಯೇ..? ಎಂದು ಒಮ್ಮೆ ಇಣುಕಿ ನೋಡಿದರೆ ಅಲ್ಲೆಲ್ಲೂ ಎಡ-ಬಲದ ಕುರುಹುಗಳು ಇಲ್ಲ. ಆದರೆ ಮಾಧ್ಯಮಗಳಲ್ಲಿ, ಈ ಅಸ್ಪಶ್ಯ ಸಮುದಾಯದಾಚೆಯ ಒಂದು ವರ್ಗ ಈ ಎಡಬಲ ಇದರ ಜೊತೆಗೆ ಒಳಮೀಸಲಾತಿಯ ಜಿಜ್ಞಾಸೆಗಳನ್ನು ಸಮುದಾಯದ ಹೋರಾಟಗಳಂತೆ ವಿಷ ಬಿತ್ತುತ್ತಿರುವುದನ್ನು ಖುದ್ದು ನೋಡಿದ್ದೇನೆ.

ಇನ್ನು ಪರಿಶಿಷ್ಟ ಸಮುದಾಯಕ್ಕೆ 10 ಶೇ. ಮೀಸಲು ಈಗಾಗಲೇ ಕ್ಲಿಯರ್ ಆಗಿದೆ. ಇವುಗಳನ್ನೇ ಸರಿಯಾಗಿ ಅನುಷ್ಠಾನಗೊಳಿಸದ ಕಾಲದಲ್ಲಿ ಇದೇನಿದು ಒಳಮೀಸಲು ಎಂದು ಪ್ರಶ್ನಿಸಬಹುದು. ವಕೀಲರಾದ ಕೆ. ಬಾಲನ್ ಅವರು ಹೇಳುವಂತೆ ಎಡಗೈ ಸಮುದಾಯದವರು ಕೆಲಸ ಮಾಡುವ ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಸೇರಿದಂತೆ ಈ ವರ್ಗ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ಹಾಗಾಗಿ ಒಳಮೀಸಲಾತಿ ಬೇಕೇ ಬೇಕು. ಇದನ್ನು ಒಪ್ಪದವರು ದಲಿತ ವಿರೋಧಿಗಳು ಎನ್ನಬೇಕಾಗುತ್ತದೆ ಎಂದು ಹೇಳಿದ್ದಾರೆ ಅವರು ಹೇಳಿರುವುದರಲ್ಲಿ ಯಾವ ತಪ್ಪಿಲ್ಲ. ಹೌದು ಯಾರು ಒಪ್ಪಿಲ್ಲ... ಅವರ ಹೆಸರನ್ನೇ ಹೇಳಬೇಕಲ್ಲವೇ....? ಬಲಗೈ ಸಮುದಾಯದ ಖರ್ಗೆ, ಪರಮೇಶ್ವರ್ ಅವರಿಂದ ಹಿಡಿದು ದೇವನೂರ ಮಹಾದೇವ, ಡಾ. ಸಿದ್ದಲಿಂಗಯ್ಯ ಸೇರಿದಂತೆ ಎಲ್ಲರೂ ಒಪ್ಪಿದ್ದಾರೆ ಆದರೂ ದೇವನೂರರನ್ನು ಒಳಮೀಸಲಾತಿ ವಿರೋಧಿ ಎನ್ನಲಾಗುತ್ತಿದೆ. ವಾಸ್ತವ ಏನೆಂದರೆ ಒಳಮೀಸಲಾತಿಯನ್ನು ಅನುಷ್ಠಾನಗೊಳಿಸುವುದು ದೇವನೂರ, ಸಿದ್ದಲಿಂಗಯ್ಯನವರಲ್ಲ. ನಾವು ಒತ್ತಾಯ ಮಾಡಬೇಕಿರುವುದು ರಾಜಕಾರಣಿಗಳನ್ನು ಅದರಲ್ಲೂ ಆಡಳಿತ ಪಕ್ಷದವರನ್ನು.

ಇಂತಹ ಪರಿಸ್ಥಿತಿಯಲ್ಲಿ ಎಡ-ಬಲ ಎಂಬ ಕಲ್ಪನೆ ಇಟ್ಟುಕೊಂಡು ಒಳ ಮೀಸಲಾತಿ ಪ್ರಸ್ತಾಪ ಮಾಡುವುದು ಎಷ್ಟು ಸರಿ..? ಅದನ್ನು ಮೇಲ್ಪಂಕ್ತಿಗೆ ತರುತ್ತಿರುವವರ್ಯಾರು ಇದರಿಂದ ಅವರಿಗಿರುವ ಲಾಭ ಏನು..? ಎಂಬ ಬಗ್ಗೆಯೂ ಯೋಚಿಸಬೇಕಲ್ಲವೇ..? ವಾಸ್ತವದಲ್ಲಿ ಒಳ ಮೀಸಲಾತಿ ಪ್ರಸ್ತಾಪ ಮಾಡುತ್ತಿರುವುದು ಅವರು ಎಡಗೈ ಅಲ್ಲ ಬಲಗೈ ಕೂಡ ಅಲ್ಲ. ಹಾಗಾಗಿ ಎಡಗೈ ಸಮುದಾಯ ಬಲಗೈ ಸಮುದಾಯವನ್ನು ಅನುಮಾನದಿಂದ ನೋಡುವ ಯಾವ ಅಗತ್ಯವೂ ಇಲ್ಲ. ಅಂತಹ ಆರೋಪಗಳಿಗೆ ಕಿವಿಗೊಡುವ ಪ್ರಮೇಯವೂ ಇಲ್ಲ. ಏಕೆಂದರೆ ಎಲ್ಲರೂ ಒಳಮೀಸಲಾತಿ ಪರ ಇದ್ದಾರೆ ಹಾಗೆ ವಿರೋಧಿಸುತ್ತಿರುವ ಪಟ್ಟಿ ಇದ್ದರೆ ಕೊಡಿ...

ಮೀಸಲಾತಿಯೇ ಅಪ್ರಸ್ತುತವಾಗುತ್ತಿರುವ ಕಾಲ:

ನಿಜ ಈಗ ಎಲ್ಲಾ ಮೀಸಲಾತಿಗಳು ಅಪ್ರಸ್ತುತವಾಗುತ್ತಿವೆ.

ಇಂತಹ ಸಂದರ್ಭದಲ್ಲಿ ಮನಸ್ಸುಗಳನ್ನು ಒಡೆಯುವುದು ಬೇಡ. ನೊಂದವರೆಲ್ಲ ಒಂದೇ ಥರ ಇರೋಣ. ಪಡೆದವರು ಮತ್ತು ಪಡೆಯದಿರುವವರು ಎಂಬ ಎರಡು ವರ್ಗ ಮಾತ್ರವೇ ಇದೆ. ನಮಗೆ ಮೀಸಲು ಮೂಲಕವಾಗಿಯೇ ಕೊಟ್ಟ ಎಲ್ಲಾ ಸವಲತ್ತುಗಳನ್ನು ಪಡೆಯುವುದಾಗಿದ್ದರೆ ಮೀಸಲು ಹಣ ಏಕೆ ಪ್ರತಿ ವರ್ಷ ವಾಪಸ್ ಹೋಗುತ್ತದೆ.. ಅಲ್ಲವೇ..? ಹಾಗಾಗಿ ಇದಕ್ಕಾಗಿ ಎಲ್ಲರೂ ಒಟ್ಟಿಗೆ ಹೋರಾಟ ಮಾಡುವ ಅವಕಾಶವನ್ನು ನಾವೇ ಮಾಡಿಕೊಳ್ಳೋಣ. ಇಷ್ಟಕ್ಕೂ ಒಳ ಮೀಸಲು ಎಂದರೆ ದೇವನೂರ ಅವರನ್ನು ಯಾಕೆ ಪರಿಗಣಿಸಬೇಕು..?

 ಯಾರ ವಿರುದ್ಧ ಹೋರಾಟ ಮಾಡಬೇಕು ಎಂಬ ಗೊಂದಲ ನಮ್ಮಲ್ಲಿದ್ದರೆ ನಮ್ಮ ನಡುವಿನ ಕಂದಕ ನಿರ್ಮಾಣವಾಗುತ್ತಲೇ ಹೋಗುತ್ತವೆ. ಎಡಗೈಗೆ ಎರಡು ತುತ್ತು ಜಾಸ್ತಿ ಕೊಟ್ಟರೆ ನಮಗೆ ಇನ್ನೂ ಸಂತೋಷ ಏಕೆಂದರೆ ಎಡಗೈ ನಮ್ಮ ಕೊಳಕನ್ನು ಬಾಚಿದ ಇತಿಹಾಸ ಹೊಂದಿದೆ. ಈ ಕಾರಣಕ್ಕಾಗಿ ನಮ್ಮ ಶಕ್ತಿ ತೋರಿಸಬೇಕಾದ ಅನಿವಾರ್ಯತೆ ಇಂದು ನಮ್ಮ ಮುಂದಿದೆ.

 ಈ ಬಗ್ಗೆ ದೇವನೂರ ಮಹಾದೇವ ಮೊದಲೇ ಆತಂಕ ವ್ಯಕ್ತಪಡಿಸಿದ್ದಾರೆ. ನಾವು ಹೀಗೆ ಜಗಳ ಆಡಿಕೊಂಡು ಕುಳಿತಿದ್ದರೆ ಟಚಬಲ್ ರಾಜಕಾರಣಿಗಳೊಂದಿಗೆ ಸೇರಿಕೊಂಡು ಆಳುವ ವರ್ಗವಾಗುತ್ತಲೇ ಹೋಗುತ್ತಾರೆ. ಆಳುವರಿಗೂ ಕೂಡ ಬೇಕಿರುವುದು ಸ್ಪಶ್ಯರು ಮಾತ್ರ. ಈ ದೇಶದಲ್ಲಿ ಅಸ್ಪಶ್ಯರಿಗೆ ಅಧಿಕಾರ ಕೊಟ್ಟ ಉದಾಹರಣೆ ಕಡಿಮೆ. ಎಲ್ಲಾ ಮೇಲ್ಜಾತಿಯ ಮಂತ್ರಿಗಳು ಮಾನಸಿಕವಾಗಿ ನಮ್ಮಿಂದಿಗೆ ಇರುವುದಿಲ್ಲ ಹಾಗಾಗಿ ಇದರ ಹಿಂದಿನ ಸೂಕ್ಷ್ಮತೆಯನ್ನು ಗಮನಿಸುವುದು ಉತ್ತಮ.

ಸುಪ್ರೀಂ ಕೋರ್ಟ್ ಒಳಮೀಸಲಾತಿ ಪರವಾಗಿ ತೀರ್ಪು ನೀಡಿದೆ. ಹೌದು ಸದಾಶಿವ ವರದಿಯ ಪ್ರಕಾರವೇ ಅನುಷ್ಠಾನವಾಗಲಿ. ಅದರ ಮಾನದಂಡಗಳು ಜನಸಂಖ್ಯೆ, ಆರ್ಥಿಕತೆ, ಬಡತನ ಯಾವುದಾದರೂ ಆಗಿರಬಹುದು ಒಳಮೀಸಲು ಜಾರಿ ಮಾಡಲಿ.

 ದುರಂತ ಎಂದರೆ ನಾವು ಯಾವ ಕಾಲಘಟ್ಟದಲ್ಲಿ ಕೇಳುತ್ತಿದ್ದೇವೆಂದರೆ ಸದ್ಯ ಸರಕಾರಿ ಕೆಲಸಗಳೇ ಇಲ್ಲ. ಇದ್ದವರನ್ನು ಸ್ವಯಂ ನಿವೃತ್ತಿ ಮಾಡಿಸಲಾಗುತ್ತಿದೆ. ಬಿಎಸ್ಸೆೆನ್ನೆಲ್, ಏರ್ ಇಂಡಿಯಾ, ರೈಲ್ವೇ ಎಲ್ಲವೂ ಖಾಸಗಿ ಪಾಲಾಗಿವೆ. ಇನ್ನು ಯಾವ ಮೀಸಲಾತಿ ಕೇಳಿ ಪಡೆದುಕೊಂಡರು ಕೆಲಸವೇ ಇಲ್ಲದ ಜಾಗದಲ್ಲಿ ಏನು ಪ್ರಯೋಜನ...? ದುರಂತ ಎಂದರೆ ರಾಜಕೀಯ ಮೀಸಲಾತಿ ಮತ್ತು ಖಾಸಗಿ ವಲಯದ ಮೀಸಲಾತಿ ಬಗ್ಗೆ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ. ಕರ್ನಾಟಕದ ಒಂದೂವರೆ ಕೋಟಿ ಎಸ್ಸಿ ಜನಾಂಗಕ್ಕೆ ಎಷ್ಟು ಮೀಸಲಾತಿ ಬೇಕಾಗಬಹುದು ಊಹಿಸಿ...

ಸದ್ಯ ಒಳಮೀಸಲಾತಿ ವಿಷಯವಾಗಿ ಬರೆಯುವ ಡಿಬೆಟ್‌ಗಳೆಂದರೆ ಎಡ ಬಲಗಳ ನಡುವೆ ಕಂದಕ ಏರ್ಪಡಿಸಿ ನೋಡಿ ನಗುತ್ತಾ, ಕುಹಕವಾಡುವ ಡಿಬೆಟ್‌ಗಳು.

ದಯಮಾಡಿ ಇದನ್ನು ದೊಡ್ಡದು ಮಾಡಬೇಡಿ ನಾವೆಲ್ಲ ಸೌಹಾರ್ದದಿಂದಿದ್ದೇವೆ. ಅಸ್ಪಶ್ಯ ಜಾತಿಗಳ ನಡುವೆ ಗೆರೆ ಎಳೆದು ಡಿವೈಡ್ ಆ್ಯಂಡ್ ರೂಲ್ ಮಾಡಬೇಡಿ. ಅವರವರು ಅವರ ಶಕ್ತಿ ಅನುಸಾರ ಪಡೆದುಕೊಳ್ಳುತ್ತಾರೆ. ಇಂದಿಗೂ ಅಸ್ಪಶ್ಯತೆಯತೆ ಆಚರಣೆಯನ್ನು ಸಮಾನವಾಗಿ ಹೊಲೆಮಾದಿಗರು ಅತ್ಯಂತ ಕ್ರೂರವಾಗಿ ಅನುಸರಿಸುತ್ತಿದ್ದಾರೆ. ಎಡ-ಬಲ ಒಂದು ಸಮಸ್ಯೆ ಅಲ್ಲ ಆದರೆ ಅದನ್ನು ಸೀಲ್ ಮಾಡುತ್ತಿದ್ದಾರೆ. ಬಲಗೈನವರನ್ನು ದೊಡ್ಡ ವಿರೋಧಿಗಳಂತೆ ನೋಡುತ್ತಿದ್ದಾರೆ.

ಸದ್ಯ ಸುಪ್ರೀಂ ಕೋರ್ಟ್ ಹೇಳಿರುವುದು ಸರಿಯಾಗಿದೆ, ಸಾಧ್ಯವಾದರೆ ಅನುಷ್ಠಾನಗೊಳಿಸಲು ಪ್ರಯತ್ನಿಸೋಣ. ಆದರೆ ಡಿಬೆಟ್ ಮಾಡಿ ಕಂದಕ ತರುವುದು ಬೇಡ. ಇಲ್ಲಿ ಯಾರು ಯಾರ ಪಾಲನ್ನೂ ತಿನ್ನುತ್ತಿಲ್ಲ ಬದಲಾಗಿ ಮೂವತ್ತು ವರ್ಷದಿಂದ ಕಸ ಗುಡಿಸುತ್ತಲೇ ಇರುವ ಪೌರ ಕಾರ್ಮಿಕನಿಗೆ ಕ್ಲರ್ಕ್ ಭಾಗ್ಯ ಯಾಕೆ ಸಿಗಲಿಲ್ಲ ಎಂಬ ಬಗ್ಗೆ ಮಾತನಾಡೋಣ.. ಅಲ್ಲವೇ..?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top