ಅರ್ಹ ಶಿಕ್ಷಕರನ್ನು ನೇಮಕ ಮಾಡಿ
ಮಾನ್ಯರೇ,
ಭಾರತದ 1.10ಲಕ್ಷ ಶಾಲೆಗಳಲ್ಲಿ (1ರಿಂದ 7ನೇ ತರಗತಿ) ಕೇವಲ ಒಬ್ಬರೇ ಶಿಕ್ಷಕರಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಷ್ಟು ಉತ್ತಮ ಶಿಕ್ಷಣ ದೊರೆಯಬಹುದು?
ದೇಶದ ಶೇಕಡಾ 42 ಪ್ರಜೆಗಳು ನಿರುದ್ಯೋಗಿಯಾಗಿರುವಾಗ 6ಲಕ್ಷ 10ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದೆ ತಿಂಗಳಿಗೆ 1,220 ಕೋಟಿ ರೂ. ಉಳಿಸಬಹುದು ಎಂದು ರಾಜ್ಯ ಸರಕಾರಗಳು ಭಾವಿಸಿದಂತಿದೆ.
ಬಿಹಾರದಂತಹ ಹಿಂದುಳಿದ ರಾಜ್ಯಗಳಲ್ಲಿ ಶಿಕ್ಷಕರಾಗಿ ನೇಮಕವಾಗಿ ಕಳೆದ ದಶಕಗಳಿಂದ ಸೇವೆ ಸಲ್ಲಿಸುವ ಶೇ. 41 ಮಂದಿ ಶಿಕ್ಷಕರಿಗೆ ಸರಿಯಾಗಿ ಓದಲು ಬರೆಯಲು ಬಾರದು ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇಂತಹ ಶಿಕ್ಷಕರಿಂದ ವಿದ್ಯಾರ್ಥಿಗಳು ಏನನ್ನು ಅಪೇಕ್ಷಿಸಬಹುದು? ಆದುದರಿಂದ ಸೂಕ್ತ ವಿದ್ಯಾರ್ಹತೆ ಹೊಂದಿದ ಶಿಕ್ಷಕರನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಆರಿಸಿ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೋಗವನ್ನು ತೊಲಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರಕಾರಗಳು (ರಾಜ್ಯ) ಮಾಡಬೇಕಾಗಿದೆ.
Next Story