-

ರಸ್ತೆ ರಿಪೇರಿ ಆಗಬೇಕಾದರೆ ವಿಐಪಿಗಳೇ ಬರಬೇಕೇ?

-

ಮಾನ್ಯರೇ,

ಬೆಂಗಳೂರು ನಗರದ ನಾಗರಿಕರು ತೆರಿಗೆಯನ್ನು ಕಟ್ಟುತ್ತಾ ಸರಕಾರದ ನಿಯಮಗಳನ್ನು ಪಾಲಿಸುತ್ತಾ ತಮ್ಮ ರಸ್ತೆಗಳ ರಿಪೇರಿಗಾಗಿ ಗುಂಡಿಗಳನ್ನು ಮುಚ್ಚುವ ಸಲುವಾಗಿ, ಬೀದಿ ದೀಪಗಳಿಗಾಗಿ, ಕಸದ ಸಮಸ್ಯೆಗಾಗಿ ಎಷ್ಟು ಬಾರಿ ಬಾಯಿಬಡಿದುಕೊಂಡರೂ ನಮ್ಮ ಅಧಿಕಾರಿಗಳಿಗೆ, ಗೌರವಾನ್ವಿತ ಮಂತ್ರಿಗಳಿಗೆ ಹಾಗೂ ಸರಕಾರಕ್ಕೆ ಅವುಗಳು ಕೇಳಿಸುವುದೇ ಇಲ್ಲ. ಈಗಾಗಲೇ ಗುಂಡಿ ಬಿದ್ದ ರಸ್ತೆಗಳಲ್ಲಿ ಅಪಘಾತಗಳಾಗಿ ಹತ್ತಾರು ಜೀವಗಳಿಗೆ ಪ್ರಾಣಹಾನಿಯಾಗಿದೆ. ಇನ್ನು ಮಳೆ ಬಂದ ಸಮಯದಲ್ಲಿ ಒತ್ತುವರಿ ಮಾಡಿಕೊಂಡಿರುವ ಪುಣ್ಯ ಪುರುಷರ ಕೃಪೆಯಿಂದಾಗಿ ರಾಜಕಾಲುವೆಗಳಲ್ಲಿ ನೀರು ಉಕ್ಕಿ ಹರಿದು ಮನೆಗಳಿಗೆ ನೀರು ನುಗ್ಗುವುದು ಹಾಗೂ ದೊಡ್ಡ ಮೋರಿಗಳಲ್ಲಿ ಹಲವಾರು ಮಂದಿ ಸಿಲುಕಿ ನರಳಿ ನರಳಿ ಪ್ರಾಣವನ್ನು ಬಿಟ್ಟಿರುವ ಬಹಳಷ್ಟು ಉದಾಹರಣೆಗಳಿವೆ. ಆದರೂ ಕೇವಲ ತೋರಿಕೆಯ ಮಾತುಗಳು, ಆವೇಶದ ಹೇಳಿಕೆಗಳು ಮಾತ್ರವೇ ಜನರಿಗೆ ಸಿಗುತ್ತಿತ್ತು.

ಇತ್ತೀಚೆಗೆ ಪ್ರಧಾನಮಂತ್ರಿ ನಗರಕ್ಕಾಗಮಿಸಿದ ಸಂದರ್ಭ ಅವರು ಸಂಚರಿಸುವ ರಸ್ತೆಗಳೆಲ್ಲವೂ ರಾತ್ರೋರಾತ್ರಿ ಗುಂಡಿ ಮುಕ್ತವಾಯಿತು. ಕಂಬಗಳು ದೀಪಕಂಡವು, ಕಸದ ರಾಶಿಗಳು ಮಾಯವಾದವು. ಇದರಿಂದ ಒಂದು ಸತ್ಯ ಅರಿವಾಯಿತು. ನಮ್ಮ ಬಡಾವಣೆಗಳ ರಸ್ತೆಗಳು ರಿಪೇರಿಯಾಗಬೇಕಾದರೆ, ಕಸದ ರಾಶಿ ಮಾಯವಾಗಬೇಕಾದರೆ, ಕೆಟ್ಟು ನಿಂತ ದೀಪಗಳು ಉರಿಯಬೇಕಾದರೆ ನಮ್ಮ ರಸ್ತೆಗಳಿಗೂ ಪ್ರಧಾನಮಂತ್ರಿಯೋ, ರಾಷ್ಟ್ರಪತಿಯೋ ಅಥವಾ ಉಪರಾಷ್ಟ್ರಪತಿಯೋ ಬರಬೇಕು. ಇವರು ಬಂದರೆ ಮಾತ್ರ ನಮ್ಮ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ. ಈ ಎಲ್ಲವೂ ನಾಗರಿಕರ ಮೇಲಿನ ಪ್ರೀತಿಗಾಗಿ ಮಾಡುವ ಕಾಮಗಾರಿಗಳಲ್ಲ. ವಿಐಪಿಗಳನ್ನು ಓಲೈಸಿಕೊಳ್ಳಲು ಮಾಡುವಂತಹ ಕಾಯಕಗಳು. ಪ್ರಧಾನಮಂತ್ರಿ ಬೆಂಗಳೂರು ನಗರದ ಬಗ್ಗೆ ಅನೇಕ ಮಾತುಗಳನ್ನಾಡಿದ್ದಾರೆ. ಆದರೆ ಅವರು ತಮ್ಮ ಸರಕಾರದ ಪ್ರಮುಖರಿಗೆ ಕಿವಿಹಿಂಡಿ ಬೆಂಗಳೂರು ನಗರದ ಎಲ್ಲಾ ಬಡಾವಣೆಗಳ ನಾಗರಿಕರ ಸಂಚಾರಕ್ಕೆ ರಸ್ತೆಗಳು ಗುಂಡಿ ಮುಕ್ತವಾಗಲಿ, ಕಸದ ತಿಪ್ಪೆಗಳು ಮಾಯವಾಗಲಿ, ಬೀದಿದೀಪಗಳು ಉರಿಯಲಿ ಎಂಬ ಉಪದೇಶ ಮಾಡಬೇಕಿತ್ತು. ನಲವತ್ತು ವರ್ಷದಿಂದ ಬೆಂಗಳೂರು ನಗರವನ್ನು ಅಭಿವೃದ್ಧಿ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲವೆಂಬ ಅವರ ಮಾತು ಕೇಳಿ ಅವರಿಗೆ ಮಾಹಿತಿಯ ಕೊರತೆ ಇದೆ ಎನಿಸಿತು. ಬೆಂಗಳೂರು ನಗರಕ್ಕೆ ಅರವತ್ತು ವರ್ಷದ ಹಿಂದೆಯೇ ಕಾವೇರಿ ನೀರು ತಂದುಕೊಟ್ಟ ಪುಣ್ಯಾತ್ಮರಿದ್ದಾರೆ. ನೂರಾರು ವರ್ಷದ ಹಿಂದೆಯೇ ವಿದ್ಯುಚ್ಛಕ್ತಿಯನ್ನು ನೀಡಿದ ಮಹನೀಯರಿದ್ದಾರೆ. ಬಿಡಿಎ ವತಿಯಿಂದ ಲಕ್ಷಾಂತರ ನಿವೇಶನಗಳನ್ನು ಕಲ್ಪಿಸಿಕೊಟ್ಟ ಪ್ರಾಮಾಣಿಕರಿದ್ದಾರೆ. ಮಾಹಿತಿ ತಂತ್ರಜ್ಞಾನದ ವಿಶ್ವದ ರಾಜಧಾನಿಯನ್ನಾಗಿಸಿ ಮೇಲ್ಸೇತುವೆಗಳು, ವರ್ತುಲ ರಸ್ತೆಗಳು, ಸುರಂಗ ಮಾರ್ಗಗಳು, ಉದ್ಯಾನವನಗಳು, ಆಟದ ಮೈದಾನಗಳು, ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಎಲ್ಲವನ್ನೂ ಕಾಲಕಾಲಕ್ಕೆ ಕೊಟ್ಟಿದ್ದಾರೆ. ಕೆಲವರ ಪಾಲು ಕಡಿಮೆ ಇರಬಹುದು, ಕೆಲವರ ಪಾಲು ಹೆಚ್ಚಿರಬಹುದು. ನಲವತ್ತು ವರ್ಷದ ಹಿಂದೆ ಬೆಂಗಳೂರು ನಗರದ ವಿಸ್ತೀರ್ಣವೂ ಇಷ್ಟಿರಲಿಲ್ಲ, ವಾಹನ ಸಂಚಾರವೂ ಇಷ್ಟಿರಲಿಲ್ಲ, ಜನಸಂಖ್ಯೆಯೂ ಇಷ್ಟಿರಲಿಲ್ಲ. ಹೀಗಾಗಿ ಈಗ ಪ್ರಸ್ತಾಪಿಸಲ್ಪಡುತ್ತಿರುವ ಯೋಜನೆಗಳು ಅಂದಿನ ಸಂದರ್ಭದ ಆದ್ಯತೆಗಳಾಗಲು ಸಾಧ್ಯವೇ ಇಲ್ಲ. ಅಂದು ಬೆಂಗಳೂರು ಚಿಕ್ಕದಾಗಿತ್ತು, ಚೊಕ್ಕವಾಗಿತ್ತು, ಪ್ರಾಮಾಣಿಕವಾಗಿ ಜನಪರ ಕಾಳಜಿಯಿಂದ ದುಡಿಯುವ ಪ್ರತಿನಿಧಿಗಳು ಇದ್ದರು. ಇಂದು ಎಲ್ಲವೂ ಇದೆ ಆದರೆ ಜನರಿಗೆ ಸ್ಪಂದಿಸುವ ಮನಸ್ಸುಳ್ಳ ಪ್ರತಿನಿಧಿಗಳ ಕೊರತೆ ಎದ್ದು ಕಾಣುತ್ತಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top