-

ಆದಿವಾಸಿಗಳ ಸಮಾಜೋರಾಜಕೀಯ ಪರಿಸ್ಥಿತಿಯನ್ನು ಬಿಚ್ಚಿಡುವ ಕೃತಿ

-

ಕುತ್ಲೂರು ಕಥನ ಒಂದು ರಾಜಕೀಯ ಓದು. ಒಂದು ಬುಡಕಟ್ಟು ಸಮುದಾಯವನ್ನು ರಾಜಕೀಯ ವ್ಯವಸ್ಥೆಯೊಂದು ಹೇಗೆ ಬಗ್ಗು ಬಡಿಯಲು ಯತ್ನಿಸುತ್ತದೆ ಎಂಬುದಕ್ಕೆ ಕುತ್ಲೂರು ಎಂಬ ಕಾಡಿನೊಳಗಿನ ಗ್ರಾಮ ಜ್ವಲಂತ ನಿದರ್ಶನ. ಯುಪಿಎ ನೇತೃತ್ವದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸರಕಾರವು ಬುಡಕಟ್ಟು ನಿವಾಸಿಗಳಿಗಾಗಿ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದ್ದರೂ, ಅವೆಲ್ಲವನ್ನು ಕತ್ತಲಲ್ಲಿಟ್ಟು ರಾಜ್ಯ ಸರಕಾರಗಳು ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತವೆ. ಆದಿವಾಸಿಗಳು ಒಕ್ಕಲೇಳಲು ಒಪ್ಪದೇ ಇದ್ದಾಗ ಅವರ ಮೇಲೆ ನಕ್ಸಲ್ ಆರೋಪ ಹೊರಿಸಿ ಹಿಂಸೆ ನೀಡಲಾಗುತ್ತದೆ.

2006ರ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಜೀವನ ನಿರ್ವಹಣೆಗಾಗಿ ಭೂಮಿಯನ್ನು ಹೊಂದುವ ಹಕ್ಕು, ಜಲಚರ ಉತ್ಪನ್ನಗಳ ಸಂಗ್ರಹ, ಜಾನುವಾರುಗಳನ್ನು ಮೇಯಿಸುವ ಹಾಗೂ ಸಾಂಪ್ರದಾಯಿಕ ಸಂಪನ್ಮೂಲಗಳನ್ನು ಹೊಂದುವ ಹಕ್ಕು, ಅರಣ್ಯ ಭೂಮಿಗಳ ಸಂಬಂಧದಲ್ಲಿ ರಾಜ್ಯ ಸರಕಾರ/ಸ್ಥಳೀಯ ಸಂಸ್ಥೆಗಳು ನೀಡುವ ಪಟ್ಟಾ, ಗುತ್ತಿಗೆ ಅಥವಾ ಮಂಜೂರಾತಿಗಳನ್ನು ಹಕ್ಕುಗಳಾಗಿ ಪರಿವರ್ತಿಸುವ ಅವಕಾಶ, ಅರಣ್ಯಗಳಲ್ಲಿನ ಎಲ್ಲಾ ಅರಣ್ಯ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಹಕ್ಕುಗಳನ್ನು ನೀಡಿದೆ. ಆದರೂ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದಿಂದ ಮಲೆಕುಡಿಯ ಸಮುದಾಯವನ್ನು ಸ್ಥಳಾಂತರಿಸಲು ಸರಕಾರ ಸಿದ್ಧತೆ ನಡೆಸಿತ್ತು. ಲೇಖಕ-ಪತ್ರಕರ್ತ ನವೀನ್ ಸೂರಿಂಜೆ, ಎಡ ಯುವ ಮುಖಂಡ ಮುನೀರ್ ಕಾಟಿಪಳ್ಳ, ಶಿಭಿ ಧರ್ಮಸ್ಥಳ, ಹಿರಿಯ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ, ಬಿ.ಎಂ. ಭಟ್, ಶಿವಕುಮಾರ್, ಹರಿದಾಸ್, ಶೇಖರ್ ಲಾಯಿಲ ಮತ್ತಿತರ ಗೆಳೆಯರ ತಂಡ ಮಲೆಕುಡಿಯರ ಬೆನ್ನಿಗೆ ನಿಂತಿದ್ದರಿಂದ ಇಂದು ಮಲೆಕುಡಿಯರು ಅರಣ್ಯದಲ್ಲಿರುವ ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಇಲ್ಲದೇ ಇದ್ದಲ್ಲಿ ಪ್ರತೀ ಮಲೆಕುಡಿಯ ಸಮುದಾಯದ ಮನೆಯಲ್ಲೊಬ್ಬ ನಕ್ಸಲನನ್ನು ಪೊಲೀಸರೇ ಸೃಷ್ಟಿಸುತ್ತಿದ್ದರು.

ಈಗಾಗಲೇ ಕುತ್ಲೂರು ಗ್ರಾಮದಲ್ಲಿ ಹಲವರು ನಕ್ಸಲ್ ಹೆಸರಲ್ಲಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಪ್ರಜಾಸತ್ತಾತ್ಮಕವಾಗಿ ತನ್ನ ಊರಿಗಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿ ವಿಠಲ್ ಮಲೆಕುಡಿಯ ಮೇಲೆ ಆಗಿನ ಬಿಜೆಪಿ ಸರಕಾರ ಸುಳ್ಳು ದೇಶದ್ರೋಹದ ಪ್ರಕರಣ ದಾಖಲಿಸಿತ್ತು. ದೇಶದ್ರೋಹದ ಆರೋಪವನ್ನು ಚುನಾವಣೆಗಾಗಿ ಹೇಗೆ ಪೊಲೀಸರ ಮೂಲಕ ಪ್ರಭುತ್ವ ಬಳಸಿಕೊಳ್ಳುತ್ತೆ ಎಂದು ಕೋರ್ಟ್‌ನಲ್ಲಿ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಬಯಲು ಮಾಡಿದ್ದಾರೆ. ಇವತ್ತು ಇಡೀ ದೇಶದಾದ್ಯಂತ ದೇಶದ್ರೋಹದ ಸೆಕ್ಷನ್‌ಗಳನ್ನು ಕವಿಗಳು, ಸಾಹಿತಿಗಳು, ಹೋರಾಟಗಾರರ ಮೇಲೆ ದಾಖಲಿಸಿ ಸೈದ್ಧಾಂತಿಕ ಹಗೆತನವನ್ನು ಸಾಧಿಸಲಾಗುತ್ತಿದೆ. ಇದೀಗ ನಕ್ಸಲ್ ಆರೋಪದಿಂದ ಮುಕ್ತರಾಗಿರುವ ವಿಠಲ್ ಮಲೆಕುಡಿಯರು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಕುತ್ಲೂರು ಗ್ರಾಮದ ಈ ಕಥನವು ಪ್ರಜಾಸತ್ತಾತ್ಮಕವಾಗಿ ಹೋರಾಡಲು ಬಯಸುವ ಎಲ್ಲರಿಗೂ ಒಂದು ಪಾಠ ಪುಸ್ತಕದಂತಿದೆ.

ಒಟ್ಟಾರೆ ಈ ಕೃತಿಯು ಆದಿವಾಸಿಗಳ ಸಮಾಜೋರಾಜಕೀಯ ಪರಿಸ್ಥಿತಿಯನ್ನು ಹೇಗಿದೆಯೋ ಹಾಗೇ ನಮ್ಮ ಮುಂದಿಡುತ್ತದೆ. ಎಲ್ಲರೂ, ಅದರಲ್ಲೂ ಕಾನೂನು ವಿದ್ಯಾರ್ಥಿಗಳು ಓದಲೇಬೇಕಾದ ಮಹತ್ವದ ಕೃತಿಯಿದು.

 (ಬೆನ್ನುಡಿಯಿಂದ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top