-

ರೈಲು ಬವಣೆ

ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ ಕಳ್ಳತನ ಹೆಚ್ಚಾಗಲು ಕಾರಣಗಳು

-

ರೈಲಿನೊಳಗೆ ಕಳ್ಳತನ /ಡಕಾಯಿತಿ ನಡೆಯಲು ಹಾಗೂ ಹೆಚ್ಚಾಗಲು 90 ಶೇ. ಪ್ರಕರಣಗಳಲ್ಲಿ ರೈಲು ಅಧಿಕಾರಿಗಳು ಹಾಗೂ ಕಾರ್ಮಿಕರು ನೇರ ಹೊಣೆಯಾಗಿದ್ದಾರೆ. ಈ ವಿಚಾರವನ್ನು ನೂರಾರು ಉದಾಹರಣೆಗಳೊಂದಿಗೆ ಸಂಬಂಧ ಪಟ್ಟ ರೈಲು ಅಧಿಕಾರಿಗಳಿಗೆ ನಿಯೋಗದೊಡನೆ/ಸಂತ್ರಸ್ರರೊಡನೆ ಹೋಗಿ ಮುಖತಃ ಭೇಟಿಯಾಗಿ ವಿವರಿಸಿದರೂ; ಇಂದಿಗೂ ಪರಿಹಾರ ಮಾತ್ರ ಸಿಕ್ಕಿಲ್ಲ. ಕೊಂಕಣ ರೈಲ್ವೆಯಲ್ಲಿ ಸಂಚರಿಸುವ ಎಲ್ಲ ರೈಲುಗಳಲ್ಲಿ ಕೇವಲ ಮತ್ಸ್ಯಗಂಧ (12619/12620) ಹಾಗೂ ಮಂಗಳೂರು ಎಕ್ಸ್‌ಪ್ರೆಸ್ (12133/12134) ರೈಲುಗಳಲ್ಲಿ ಯಾಕೆ ಅತೀ ಹೆಚ್ಚಿನ ಕಳ್ಳತನವಾಗುತ್ತದೆ?

ಅಪರಿಚಿತ ವೈಟಿಂಗ್ ಲಿಸ್ಟ್ ಅನಧಿಕೃತ ಸಹ ಪ್ರಯಾಣಿಕರು:
 ದೂರದೂರಿಗೆ ವಿವಿಧ ಕಾರಣಗಳಿಗೋಸ್ಕರ ಪ್ರಯಾಣಿಸಬೇಕಾದವರು ಟಿಕೆಟ್ ಬುಕಿಂಗ್ ಮಾಡುವಾಗ ತಮ್ಮ ಹೆಸರು, ಲಿಂಗ, ಪ್ರಾಯ, ಮೊಬೈಲ್ ಸಂಖ್ಯೆ, ವಿಳಾಸ, ಎಲ್ಲಿಂದ-ಎಲ್ಲಿಗೆ ಇತ್ಯಾದಿ ವಿವರಗಳನ್ನು ಅರ್ಜಿಯಲ್ಲಿ ಬರೆಯುತ್ತೇವೆ. ಹೀಗೆ ಕನ್ಫರ್ಮ್ ಸೀಟು ಸಿಕ್ಕಿ, ಪ್ರಯಾಣಿಸುವ ರೈಲು ಪ್ರಯಾಣಿಕರು ಕಳ್ಳತನಕ್ಕಿಳಿಯಲಾರರು. ಕಳ್ಳತನ ಮಾಡಿದರೂ ಅವರು ನಮ್ಮ ಪಕ್ಕದಲ್ಲೇ ಇರುವವರಾಗಿರುವುದರಿಂದ ಅವರ ಮೇಲ್ಕಂಡ ಎಲ್ಲಾ ವಿವರವು ರೈಲಿನ ಖಾತೆಯಲ್ಲಿ ಇರುವುದರಿಂದ ಅವರನ್ನು ಹಿಡಿಯುವುದು ಸುಲಭ. ಸೀಟು ಬುಕ್ಕಿಂಗ್ ಮಾಡಿದಾಗ ಆರ್‌ಎಸಿ ಟಿಕೆಟ್ ಸಿಕ್ಕರೆ, ಆನಂತರ ಚಲಿಸುವ ಟಿಕೆಟ್ ಪರಿವೀಕ್ಷಕರು ಖಾಲಿ ಇರುವ ಸೀಟಿಗೆ ಅವರನ್ನು ತಂದಾಗಲೂ, ಅವರ ವಿವರ ನಮಗೆ ರೈಲು ಖಾತೆಯಿಂದ ಸುಲಭವಾಗಿ ಸಿಗುತ್ತದೆ. ಇದೇ ಕಾರಣಕ್ಕಾಗಿ ಆರ್‌ಎಸಿ ಟಿಕೆಟ್ ಹೊಂದಿದವರು ಹೆಚ್ಚಿನಾಂಶ ಕದಿಯಲು ಹೋಗುವುದಿಲ್ಲ.
1997ರಲ್ಲಿ ಕೊಂಕಣ ರೈಲು ಆರಂಭವಾದಂದಿನಿಂದ, ಇಂದಿನ ತನಕ ದೂರದೂರಿಗೆ ಹೋಗುವ ರೈಲುಗಳಲ್ಲಿ ಕಳ್ಳತನ /ಡಕಾಯಿತಿ ಮಾಡಿದವರಲ್ಲಿ 90 ಶೇಕಡಾ ವೈಟಿಂಗ್ ಲಿಸ್ಟ್ ಪ್ರಯಾಣಿಕರು ಹಾಗೂ ಶೇ. 10 ಜನರಲ್ ಟಿಕೆಟ್ ಹೊಂದಿದ ಅಥವಾ ಹೊಂದಿಲ್ಲದೆಯೇ ರಿಸರ್ವೇಶನ್ ಬೋಗಿಯೊಳಗೆ ಹೋರಿಯಂತೆ ನುಗ್ಗುವವರಾಗಿದ್ದಾರೆ.

 ಜನರಲ್ ಟಿಕೆಟ್ ಇರುವ ಪ್ರಯಾಣಿಕರ ಯಾವ ವಿವರವೂ ರೈಲ್ವೆಯಲ್ಲಿ ಇರುವುದಿಲ್ಲ. ವೈಟಿಂಗ್ ಲಿಸ್ಟ್‌ನಲ್ಲಿ ಇರುವವರು 12 ಸ್ಲೀಪರ್ ಬೋಗಿಗಳಿರುವಾಗ, ಯಾವ ಬೋಗಿಯೊಳಗಾದರೂ ಅನಧಿಕೃತವಾಗಿ ನುಗ್ಗಿ ತಮ್ಮದಲ್ಲದ ಸೀಟಿನಲ್ಲಿ ಕುಳಿತು ಅಥವಾ ನಿದ್ರಿಸಿ ಹಾಗೂ ರೈಲು ಬಾಗಿಲಿನ ಹತ್ತಿರ ನಿಂತೇ, ಪ್ರಯಾಣಿಕರ ಮೇಲೆ ಕಣ್ಣಿಟ್ಟು ಪ್ರಯಾಣಿಕರನ್ನು ದೋಚುತ್ತಾರೆ ಎಂಬುದು ತಿಳಿಯುವುದಿಲ್ಲ. ಇವರು ಬೇಕೆಂದೇ ವೈಟಿಂಗ್ ಲಿಸ್ಟ್ ಸಿಗುತ್ತದೆ ಎಂದು ತಿಳಿದೇ, ಕಡೇ ನಿಮಿಷ ಟಿಕೆಟ್ ಬುಕಿಂಗ್ ಮಾಡುತ್ತಾರೆ. ರೈಲು ನಿಯಮಾವಳಿಗಳ ಪ್ರಕಾರ ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿದವರು ರಿಸರ್ವೇಶನ್ ಬೋಗಿಯೊಳಗೆ ಬರುವಂತಿಲ್ಲ. ಬಂದರೆ, ಅವರನ್ನು ಟಿಕೆಟ್ ರಹಿತ ಪ್ರಯಾಣಿಕ ಎಂದು ಪರಿಗಣಿಸಿ, ಈ ರೈಲಿನ ಆರಂಭದ ರೈಲು ನಿಲ್ದಾಣದಿಂದ ಅಂತ್ಯದ ನಿಲ್ದಾಣವರೆಗಿನ ಸ್ಲೀಪರ್ ಟಿಕೆಟ್ ಹಾಗೂ 250 ರೂ. ದಂಡ ವಿಧಿಸಿ ಮುಂದಿನ ಸ್ಟೇಷನ್‌ನಲ್ಲಿ ರೈಲು ನಿಂತಾಗ ಅವರನ್ನು ಜನರಲ್ ಬೋಗಿಯೊಳಗೆ ಕಳುಹಿಸಬೇಕು. ಆಗ ಶೇ. 90ರಷ್ಟು ಕಳ್ಳತನ, ಡಕಾಯಿತಿಯನ್ನು ನಿಲ್ಲಿಸಬಹುದು.
ನಿಯಮ ಪಾಲಿಸದ ರೈಲು ಅಧಿಕಾರಿಗಳು:
ಡಿಸೆಂಬರ್ 29ರಂದು, ನಾನು ರೈಲು ಸಂಖ್ಯೆ 12619 ಮತ್ಸ್ಯಗಂಧ ಎಕ್ಸ್‌ಪ್ರೆಸ್‌ನ ಸ್ಲೀಪರ್ ಬೋಗಿಯೊಳಗೆ ಕೂತಿದ್ದೆ. ಆಗ ನಡೆದ ಸತ್ಯ ಘಟನೆ. ಅವರಲ್ಲೊಬ್ಬ ನನ್ನ ಸೀಟು ಸಂಖ್ಯೆಯನ್ನು ಕೇಳಿದ. ನಾನು ಉತ್ತರಿಸಿದ ನಂತರ, ಅವರ ಸೀಟು ಸಂಖ್ಯೆ ಕೇಳಿದಾಗ ನಾಲ್ವರೂ ‘ವೈಟಿಂಗ್ ಲಿಸ್ಟ್ ಪ್ರಯಾಣಿಕ’ರೆಂದು ತಿಳಿದು ಬಂತು. ವೈಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಸ್ಲೀಪರ್‌ನೊಳಗೆ ಪ್ರವೇಶವಿಲ್ಲ ದಂಡ ಹಾಕುತ್ತಾರೆ ಎಂದೆ.
ಆಗ ಅವರಲ್ಲೊಬ್ಬ ಹೀಗಂದ: ‘‘ನಮ್ಮದು ಅಂತರ್ಜಾಲದ ಟಿಕೆಟ್ ಅಲ್ಲ. ಅಂತರ್ಜಾಲದ ಟಿಕೆಟ್ ಆದರೆ; ವೈಟಿಂಗ್ ಲಿಸ್ಟ್ ಟಿಕೆಟ್ ರೈಲು ಹೊರಡುವ 3 ಗಂಟೆ ಮೊದಲು ಕನ್ಫರ್ಮ್ ಆಗದಿದ್ದರೆ, ಟಿಕೆಟ್ ತನ್ನಿಂದ ತಾನೇ ಕ್ಯಾನ್ಸಲ್ ಆಗಿ ಹಣ ನಮಗೆ ವಾಪಸ್ ಬರುತ್ತದೆ. ಆದರೆ ನಮ್ಮದು ‘ವಿಂಡೋ ಟಿಕೆಟ್’ (ರೈಲು ನಿಲ್ದಾಣದಲ್ಲಿ ಪಡೆದುಕೊಂಡ ಟಿಕೆಟ್) ಇದರಲ್ಲಿ ಹಣ ವಾಪಸ್ ಬರುವುದಿಲ್ಲ. ಆದುದರಿಂದ ನಾವು ಪ್ರಯಾಣಿಸಬಹುದು ಎಂದ. ನಾಲ್ವರೂ ಇದರ ಬಗ್ಗೆ ತಾವೇನು ತಪ್ಪುಮಾಡಿಲ್ಲ ಎಂಬಂತೆ ತಮ್ಮಲ್ಲೇ ಮಾತನಾಡಿಕೊಂಡರು. ಇಂದಾಪುರ ತಲುಪಿದಾಗ ಚಲಿಸುವ ಟಿಕೆಟ್ ಪರಿವೀಕ್ಷಕರು ಬಂದು ಟಿಕೆಟ್ ತಪಾಸಿಸಿದರು.

ವೈಟಿಂಗ್ ಲಿಸ್ಟ್‌ನವರಿಗೆ ದಂಡ ಹಾಕಲಿಲ್ಲ. ನಾನು ಕೂಡಲೇ ರೈಲ್ ಮದದ್ ಆ್ಯಪ್ ಮೂಲಕ ದೂರು ನೀಡಿದೆ. 30 ನಿಮಿಷಗಳ ನಂತರ ಅದೇ ಟಿಕೆಟ್ ತಪಾಸಣಾಕಾರರು ನನ್ನ ಎದುರಿನ ಸೀಟಿನಲ್ಲಿ ಕೂತು ದೂರು ನೀಡಿದವರು ಯಾರೆಂದು ವಿಚಾರಿಸಿ; ‘‘ಅವರದು ವಿಂಡೋ ಟಿಕೆಟ್. ನೀವು ನೀಡಿದಷ್ಟೇ ಹಣ ಅವರು ನೀಡಿದ್ದಾರೆ’’ ಎಂದರು. ‘‘ಸ್ಲೀಪರ್ ಬೋಗಿಯೊಳಗೆ ಕೇವಲ ಕನ್ಫರ್ಮ್ ಹಾಗೂ ಆರ್‌ಎಸಿ ಟಿಕೆಟ್ ಹೊಂದಿದವರು ಮಾತ್ರ ಬರಬಹುದು. ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿದವರು ಬರುವಂತಿಲ್ಲ. ಆದುದರಿಂದ ರೈಲು ನಿಯಮಾವಳಿಗಳ ಪ್ರಕಾರ, ನೀವು ದಂಡ ವಸೂಲಿ ಮಾಡಿ, ಜನರಲ್ ಬೋಗಿಗೂ ಕಳಿಸಿಲ್ಲ. ಆದುದರಿಂದ ನೀವು ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಲ್ಲ. ಇದರಿಂದಾಗಿ ದಂಡದ ಹಣವು ರೈಲ್ವೆಗೆ ನಷ್ಟವಾಗಿದೆ. ನಿಮಗೆ ವೈಟಿಂಗ್ ಲಿಸ್ಟ್ ನಿಯಮಾವಳಿಗಳು ತಿಳಿದಿದ್ದರೂ ನೀವು ಅವರ ಮೇಲೆ ಕ್ರಮ ಕೈಗೊಂಡಿಲ್ಲ. ಈ ನಾಲ್ವರಲ್ಲಿ ಯಾರಾದರೂ ಕಳ್ಳತನ ಮಾಡಿದರೆ, ಅವರನ್ನು ಗುರುತಿಸಿ ಹಿಡಿಯಲು ಸಾಧ್ಯವಿಲ್ಲ. ಆದುದರಿಂದಲೇ ವೇಟಿಂಗ್ ಲಿಸ್ಟ್ ಪ್ರಯಾಣಿಕರು ಒಳಗೆ ಬರಬಾರದೆಂದು ನಿಯಮ ತರಲಾಗಿದೆ. ಕಳ್ಳತನವಾದರೆ ನೀವೇ ಜವಾಬ್ದಾರರು. ಇದೀಗ ನೀವು ನಾಲ್ವರಿಂದಲೂ ದಂಡ ವಸೂಲಿ ಮಾಡದಿದ್ದರೆ, ರೈಲು ಮಂತ್ರಿಗೆ ನಾನು ಟ್ವೀಟ್ ಮಾಡುವೆ’’ ಎಂದೆ
ಆದರೂ ಟಿಕೆಟ್ ತಪಾಸಣಾಗಾರರು ಆ ನಾಲ್ವರು ವೈಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ದಂಡ ವಿಧಿಸದೆ, ಅವರನ್ನು ಮುಂದಿನ ಬೋಗಿಗೆ ಕರೆದುಕೊಂಡು ಹೋದರು. ಮತ್ಸಗಂಧ ರೈಲಿನ 12 ಸ್ಲೀಪರ್‌ಗಳಲ್ಲಿ ಅಂದು ಸುಮಾರು 120ರಷ್ಟು ವೈಟಿಂಗ್ ಪ್ರಯಾಣಿಕರಿದ್ದು, ರೈಲು ನಿಯಮಾವಳಿಗಳ ಪ್ರಕಾರ ಅವರಿಗೆ 250 ದಂಡ ವಿಧಿಸಿದ್ದರೆ ರೂ. 30,000 ಭಾರತೀಯ ರೈಲ್ವೆಗೆ ಸಿಗುತ್ತಿತ್ತು. ಹೀಗೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳಲ್ಲೂ ದಂಡ ವಿಧಿಸಿದ್ದಾದರೆ ದಿನವೊಂದಕ್ಕೆ ರೂ. 11,70,000 ದಂಡದ ರೂಪದಲ್ಲಿಯೇ ಬರುತ್ತದೆ. ಇದು ತಿಂಗಳಿಗೆ ಹಾಗೂ ವರ್ಷಕ್ಕೆ ಲೆಕ್ಕ ಹಾಕಿದರೆ ಕೋಟಿಗಟ್ಟಲೆ ರೂಪಾಯಿ ಆಗುತ್ತದೆ.
ಹೀಗೆ ದಂಡ ಹಾಕದೆ ಬರೋಬ್ಬರಿ ಕೋಟಿಗಟ್ಟಲೆ ರೂಪಾಯಿ ಕೇವಲ ಕೊಂಕಣ ರೈಲ್ವೆ ಮಾರ್ಗದಲ್ಲಿಯೇ ನಷ್ಟ ಉಂಟಾಗುತ್ತದೆ ಹಾಗೂ ಕಳ್ಳತನ ದರೋಡೆಗೆ ಇದೇ ಕಾರಣವಾಗುತ್ತದೆ. ಆದುದರಿಂದ ಟಿಕೆಟ್ ತಪಾಸಣಾಗಾರರೂ ಕೂಡ ಪರೋಕ್ಷವಾಗಿ ಕಳ್ಳತನ, ಡಕಾಯಿತಿ ನಡೆಸಲು ಸಹಕರಿಸಿದಂತಾಯಿತು.
 ಕಳೆದ 17 ವರ್ಷಗಳಿಂದ ಪ್ರತಿಬಾರಿ ದಿನಪತ್ರಿಕೆಗಳ ವರದಿಗಾರರು ಈ ಬಗ್ಗೆ ಕೊಂಕಣ ರೈಲ್ವೆಯ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಫೋನಾಯಿಸಿದಾಗ ಎಲ್ಲಾ ಟಿಕೆಟ್ ಪರಿವೀಕ್ಷಣೆಗಾರರಿಗೆ ಇದರ ಬಗ್ಗೆ ಸೂಕ್ತ ತಿಳುವಳಿಕೆ ನೀಡಿದ್ದೇವೆ. ವೈಟಿಂಗ್ ಲಿಸ್ಟ್ ಪ್ಯಾಸೆಂಜರ್ ಈಗ ಒಳಬರುವುದಿಲ್ಲ ಎಂದು ಸತ್ಯಕ್ಕೆ ದೂರವಾದ ಮಾತನ್ನೇ ಹೇಳುತ್ತಾರೆ. ಇದರಿಂದಾಗಿ ಇವರು ಕೂಡ ಕಳ್ಳರಿಗೆ ಪರೋಕ್ಷವಾಗಿ ಸಹಕರಿಸಿದಂತಾಯಿತು.
ಅನಧಿಕೃತ ಮಾರಾಟಗಾರರು: 
ಈ ವಿಷಯವನ್ನು ಟಿಕೆಟ್ ಪರಿವೀಕ್ಷಣಗಾರರಿಗೆ ನಾನು ಮನದಟ್ಟು ಮಾಡುತ್ತಿರುವಾಗಲೇ; ಅನಧಿಕೃತ ತಂಪು ಪಾನೀಯ/ಬಾಟಲಿ ನೀರು ಮಾರಾಟ ಮಾಡುವವ ಬಂದ. ಕೂಡಲೇ ಟಿಟಿಇ ಅವನಿಗೆ ಹಿಂದಕ್ಕೆ ತಿರುಗಿ ಬಂದ ದಾರಿಯಲ್ಲಿ ವಾಪಸ್ ಹೋಗು ಎಂದು ಮೂರು ಬಾರಿ ಹೇಳಿದ. ಅನಧಿಕೃತ ಮಾರಾಟಗಾರರು ಯಾವುದೇ ರೈಲಿನ (ಪ್ಯಾಸೆಂಜರ್/ಎಕ್ಸ್‌ಪ್ರೆಸ್ ಸೂಪರ್ ಫಾಸ್ಟ್) ಯಾವುದೇ (ಜನರಲ್ /ಸ್ಲೀಪರ್ /ಏರ್ ಕಂಡೀಶನ್) ಬೋಗಿಯೊಳಗೆ ಬರಬಾರದು. ಬಂದರೆ ಟಿಟಿಇ ಅವರನ್ನು ಹಿಡಿದು ರೈಲ್ವೆ ಪೊಲೀಸರಿಗೆ ತಮ್ಮಲ್ಲಿರುವ ವಾಕಿ-ಟಾಕಿಯಿಂದ ತಿಳಿಸಿ ಅವರನ್ನು ಪೊಲೀಸರ ಕೈಗೆ ಒಪ್ಪಿಸಬೇಕು. ಈ ಅನಧಿಕೃತ ಮಾರಾಟಗಾರರು ಕತ್ತಲಾದ ನಂತರ, ರೈಲು ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನು ಕದಿಯುತ್ತಾರೆ. ಪ್ರತೀ ರೈಲು ನಿಲ್ದಾಣದಲ್ಲೂ ಉದ್ಘೋಷಣೆ: ಸದರ್ನ್ ರೈಲ್ವೆಯ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ; ಕೊಂಕಣದ ರೋಹ ಹಾಗೂ ಮತ್ಸ್ಯಗಂಧ ತಲುಪುವ ಲೋಕಮಾನ್ಯ ತಿಲಕ್ ರೈಲು ನಿಲ್ದಾಣದಲ್ಲೂ, ಗಣಕಯಂತ್ರದ ಮೂಲಕ ಆಟೋಮೆಟಿಕ್ ಉದ್ಘೋಷಣೆ ವ್ಯವಸ್ಥೆ ಇದೆ. ಆದರೆ ಇದರ ಬಳಕೆಯಾಗುತ್ತಿಲ್ಲ. ಇದರ ಬಳಕೆ ವ್ಯವಸ್ಥಿತವಾಗಿ ನಡೆಯಬೇಕು.
ಟಿಕೆಟ್ ತಪಾಸಣಾಗಾರರ ಅನುಪಸ್ಥಿತಿ ಹಾಗೂ ಬೇಜವಾಬ್ದಾರಿ: ಇತ್ತೀಚೆಗೆ ನಾನು ಡಿಸೆಂಬರ್ 5, 14, 29 ಹಾಗೂ ಜನವರಿ 7 - ಹೀಗೆ ನಾಲ್ಕು ಬಾರಿ ಕೊಂಕಣ ರೈಲ್ವೆ ಮುಖಾಂತರ ಮಂಗಳೂರು ಮುಂಬೈ ಮಧ್ಯೆ ಪ್ರಯಾಣಿಸಿದ್ದು; ಕೇವಲ ಡಿಸೆಂಬರ್ 29ರಂದು ಮಾತ್ರ ಟಿಕೆಟ್ ತಪಾಸಣಾಕಾರ ಬಂದಿದ್ದು, ಉಳಿದ ಮೂರು ಸಂಪೂರ್ಣ ಪ್ರಯಾಣದ 17:00 ಗಂಟೆಗಳ ಅವಧಿಯಲ್ಲಿ ಅವರು ನನಗೆ ಕಾಣಸಿಗಲಿಲ್ಲ.
ಕೋವಿಡ್ ನಂತರ ನಾನು ಎಂಟು ಬಾರಿ ಮಂಗಳೂರು-ಮುಂಬೈ ಮಧ್ಯೆ ಕೊಂಕಣ ರೈಲ್ವೆಯಲ್ಲಿ ಓಡಾಟ ನಡೆಸಿದ್ದು; ಯಾವ ಟಿಕೆಟ್ ತಪಾಸಣೆಗಾರರೂ ಟಿಕೆಟ್ ವೀಕ್ಷಿಸಲೇ ಇಲ್ಲ. ಒಂದು ವರ್ತುಲದಲ್ಲಿ ಎಂಟು ಜನ ಕನ್ಫರ್ಮ್ಡ್ ಪ್ರಯಾಣಿಕರು ಇರುತ್ತಾರೆ. ಹೆಚ್ಚಿಗೆ ಇದ್ದರೆ ಆಗ ನಿಮ್ಮ ಸೀಟು ಸಂಖ್ಯೆ ಹೇಳಿ ಎನ್ನುತ್ತಾರೆ. ಇಂತಹ ಬೇಜವಾಬ್ದಾರಿ ಟಿಕೆಟ್ ತಪಾಸಣಾಗಾರರಿಂದ ಕಳ್ಳತನಕ್ಕೆ ಪ್ರೋತ್ಸಾಹ ಸದಾ ಕಾಲ ಸಿಗುತ್ತಲೇ ಇದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top