ಒಡಿಶಾ ಮುಖ್ಯಮಂತ್ರಿ ಭದ್ರತೆ ಹೆಚ್ಚಳ
ಭುವನೆಶ್ವರದ ಹೋಟೆಲೊಂದರಲ್ಲಿ ನಾಲ್ಕು ಮಂದಿ ಶಂಕಿತ ಉಗ್ರರು ಅವಿತಿದ್ದರು ಎಂಬ ಮಾಹಿತಿ ಬಂದ ಮೇಲೆ ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆದರೆ ಪೊಲೀಸರು ಹೋಟೆಲ್ ತಲುಪುವ ಮೊದಲೇ ಅವರು ಅಲ್ಲಿಂದ ಪರಾರಿಯಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ .
ದೆಹಲಿ ನೋಂದಣಿಯ ಕಾರೊಂದರಲ್ಲಿ ಬಂದ ನಾಲ್ವರು ಭುಬನೆಶ್ವರದ ಹೋಟೆಲ್ ವೊಂದರಲ್ಲಿ ಇರಾಕಿ ಪ್ರಜೆಗಳೆಂದು ಪರಿಚಯಿಸಿಕೊಂಡು ರೂಂ ಬುಕ್ ಮಾಡಿದ್ದರು. ಆದರೆ ಅವರ ಬಾಲಿ ಗುರುತು ಚೀಟಿ ಕೇಳಿದ್ದಕ್ಕೆ ಅದನ್ನು ನೀಡದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಹೇಳಲಾಗಿದೆ. ಅವರು ಗಣರಾಜ್ಯೋತ್ಸವ ಆಚರಣೆಗೆ ಅಡ್ಡಿಯುಂಟು ಮಾಡಲು ಉದ್ದೇಶಿಸಿದ್ದರು ಎಂದು ಹೇಳಲಾಗಿದೆ.
Next Story