ಕತ್ತಿ ತೋರಿಸಿ ಕೊಟ್ಟಿಗೆಯಲ್ಲಿದ್ದ ದನ ಕಳವು : ದೂರು
ಹೆಬ್ರಿ : ದುಷ್ಕರ್ಮಿಗಳ ತಂಡವೊಂದು ಕತ್ತಿ ತೋರಿಸಿ ಬೆದರಿಸಿ ದನದ ಕೊಟ್ಟಿಗೆಯಲ್ಲಿದ್ದ ಎರಡು ದನಗಳನ್ನು ಕಳವು ಮಾಡಿದ್ದಾರೆ ಎನ್ನಲಾದ ಘಟನೆ ಕಬ್ಬಿನಾಲೆ ಗ್ರಾಮದ ಬಾಲ್ಚಾರು ಎಂಬಲ್ಲಿ ಜೂ.21ರಂದು ನಸುಕಿನ ವೇಳೆ ನಡೆದಿದೆ.
ಕಾರಿನಲ್ಲಿ ಬಂದ ಮೂವರು ದಯಕರ ಗೌಡ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿದ ಮೂರು ದನಗಳ ಪೈಕಿ ಎರಡು ದನಗಳನ್ನು ಕಳವುಗೈದು ಎಳೆದುಕೊಂಡು ಹೋಗುತ್ತಿದ್ದು, ಈ ವೇಳೆ ಮನೆಯವರು ದನಗಳನ್ನು ಬಿಡಿಸಿಕೊಳ್ಳಲು ಮುಂದೆ ಹೋದಾಗ ದುಷ್ಕರ್ಮಿಗಳು ಕತ್ತಿಯನ್ನು ತೋರಿಸಿ ಹೆದರಿಸಿ ದನದ ಕೊಟ್ಟಿಗೆಯನ್ನು ಕಿತ್ತು ಹಾಕಿ ಎರಡು ದನಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಎರಡು ದನಗಳ ಮೌಲ್ಯ 30 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story