ಬ್ರಹ್ಮಾವರ: ಮಳೆ, ಗಾಳಿಯಿಂದ ಮೂರು ಮನೆಗಳಿಗೆ ಹಾನಿ
ಉಡುಪಿ : ಕಳೆದೆರಡು ದಿನಗಳ ಮಳೆ ಹಾಗೂ ಗಾಳಿಯಿಂದ ಬ್ರಹ್ಮಾವರ ತಾಲೂಕಿನ ವಿವಿದೆಡೆಗಳಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿದೆ.
ತಾಲೂಕಿನ ಉಪ್ಪೂರು ಗ್ರಾಮದ ಪ್ರಕಾಶ ಎಂಬವರ ವಾಸ್ತವ್ಯದ ಪಕ್ಕಾ ಮನೆಯ ಗೋಡೆ ಭಾರೀ ಮಳೆಯಿಂದ ಕುಸಿದು ಬಿದ್ದಿದ್ದು ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಹಾರಾಡಿ ಗ್ರಾಮದ ಭಾಸ್ಕರ ಶೆಟ್ಟಿಗಾರ್ ಎಂಬವರ ಪಕ್ಕಾ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು, ೩೦ಸಾವಿರ ರೂ.ಗಳಿಗೂ ಅಧಿಕ ನಷ್ಟವಾಗಿದೆ.
ವಡ್ಡರ್ಸೆ ಗ್ರಾಮದ ವೆಂಕಟೇಶ್ ಕೊರಗ ಎಂಬವರ ವಾಸ್ತವ್ಯದ ಪಕ್ಕಾ ಮನೆಯ ಗೋಡೆ ಭಾರೀ ಮಳೆಯಿಂದ ಸಂಪೂರ್ಣ ಕುಸಿದಿದ್ದು, ಒಂದು ಲಕ್ಷ ರೂ.ಗಳಿಗೂ ಅಧಿಕ ಹಾನಿಯ ಅಂದಾಜು ಮಾಡಲಾಗಿದೆ.
Next Story