ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮ: ಪೂರ್ವ ಸಿದ್ಧತಾ ಸಭೆ
ಉಡುಪಿ : ಕರ್ನಾಟಕ ಸ್ವಾಭಿಮಾನಿ ಎಸ್ಸಿ ಎಸ್ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಉಡುಪಿ ಇದರ ನೇತೃತ್ವದಲ್ಲಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜು.೧೧ರಂದು ನಡೆಯಲಿ ರುವ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಗೂ ಪಿಕೇಟಿಂಗ್ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ಜು.೬ರಂದು ಜರಗಿತು.
ಸಭೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಅನಂತ್ ನಾಯಕ್ ಉಡುಪಿ, ಪ್ರಧಾನ ಕಾರ್ಯದರ್ಶಿ ಗಣೇಶ್ ವಿ.ಕುಂದಾಪುರ, ಉಪಾಧ್ಯಕ್ಷ ಸುಂದರ್ ಮಾಸ್ಟರ್, ಸಂಘಟನಾ ಕಾರ್ಯದರ್ಶಿಗಳಾದ ಬೋಜ ನಾಯಕ್, ದೇವೇಂದ್ರ ನಾಯಕ್ ಮಣಿಪಾಲ, ಪರಮೇಶ್ವರ ಉಪ್ಪೂರು, ಭೋಜ ನಾಯಕ್ ಬೈಂದೂರು, ನಾರಾಯಣ್ ನಾಯಕ್ ಭ್ರಮೆರಿ, ಚಂದ್ರಮೋಹನ್ ಜಡ್ಕಲ್, ಕುಮಾರ್ ದಾಸ್ ಹಾಲಾಡಿ, ಖಜಾಂಚಿ ರಮೇಶ್ ನಾಯಕ್ ಕೊಕ್ಕರ್ಣೆ, ಕಾರ್ಯನಿರ್ವಾ ಹಕ ಸದಸ್ಯರಾದ ಗೋಪಾಲ್ ನಾಯಕ್ ಸಗ್ರಿ, ಜಯರಾಮ್ ನಾಯಕ್ ಹಳ್ಳಿಹೊಳೆ, ಸಂತೋಷ್ ನಾಯಕ್ ಮುದೂರು, ಶರತ್ಚ್ಚಂದ್ರ ನಾಯಕ್ ಹಳ್ಳಿಹೊಳೆ ಉಪಸ್ಥಿತರಿದ್ದರು.
ಜು.೧೧ರಂದು ನಡೆಯುವ ಡಿಸಿ ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಎಸ್ಸಿ ಎಸ್ಟಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಸಮಿತಿಯ ಜಿಲ್ಲಾಧ್ಯಕ್ಷ ಅನಂತನಾಯ್ಕ ಮನವಿ ಮಾಡಿದ್ದಾರೆ.