ಮಣಿಪಾಲ: ಗೆಳೆಯನ ಹುಟ್ಟುಹಬ್ಬಕೆಂದು ಹೋದ ಬಾಲಕ ನಾಪತ್ತೆ
ಮಣಿಪಾಲ, ಆ.10: ಗೆಳೆಯನ ಹುಟ್ಟುಹಬ್ಬಕ್ಕಾಗಿ ಮಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋದ ಬಾಲಕ ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿರುವ ಘಟನೆ ಮಣಿಪಾಲದ ವಿ.ಪಿ.ನಗರದಲ್ಲಿ ಆ.9ರಂದು ಬೆಳಗ್ಗೆ ನಡೆದಿದೆ.
ವಿ.ಪಿ.ನಗರದ ಇಂದುಮತಿ ಎಂಬವರ ಮಗ ಪ್ರಜ್ವಲ್ ಭುಯಾನ್ (17) ನಾಪತ್ತೆಯಾದ ಬಾಲಕ. ಈತ ತನ್ನ ಗೆಳೆಯನ ಹುಟ್ಟುಹಬ್ಬದ ಬಗ್ಗೆ 3-4 ದಿನಗಳ ವರೆಗೆ ಮಂಗಳೂರಿಗೆ ಹೋಗುವುದಾಗಿ ಹೇಳಿ ಬ್ಯಾಗ್ ಮತ್ತು 3000 ರೂ. ವನ್ನು ತೆಗೆದುಕೊಂಡು ಹೋಗಿದ್ದು ಈವರೆಗೆ ಮನೆಗೆ ಬಂದಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story