ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಶಂಕರನಾರಾಯಣ, ಸೆ.5: ಮದ್ಯ ಸೇವನೆಯಿಂದ ಮಾನಸಿಕವಾಗಿ ಮನ ನೊಂದ ಅಂಪಾರು ಗ್ರಾಮದ ಗುಬ್ಯಾಡಿ ನಿವಾಸಿ ಪ್ರಭಾಕರ ಶೆಟ್ಟಿ(43) ಎಂಬವರು ಸೆ.4ರಂದು ಬೆಳಗ್ಗೆ ಮನೆಯ ಸಮೀಪ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ನಿಟ್ಟೆ ಗ್ರಾಮದ ಕಲ್ಲಂಬಾಡಿ ನಿವಾಸಿ ಪ್ರಭಾಕರ ಶೆಟ್ಟಿ (54) ಎಂಬವರು ಜೀವನದಲ್ಲಿ ನೊಂದು ಸೆ.4ರಂದು ರಾತ್ರಿ ವೇಳೆ ಮನೆಯ ಹೊರಗಿನ ಶೀಟ್ಔಟ್ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story