ದೇವಸ್ಥಾನಕ್ಕೆ ನುಗ್ಗಿ ನಗದು ಕಳವು
ಕೋಟ, ಸೆ.10: ಕಕ್ಕುಂಜೆ ಗ್ರಾಮದ ಕಂಬಿಕಲ್ಲು ಶ್ರೀಮಾಹಗಣಪತಿ ದೇವಸ್ಥಾನಕ್ಕೆ ಸೆ.8ರಂದು ರಾತ್ರಿ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿ ಹಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು, ಕಚೇರಿ ಕೊಠಡಿಯಲ್ಲಿದ್ದ ಗೋಡ್ರೇಜ್ ಮತ್ತು ಕಾಣಿಕೆ ಹುಂಡಿ ಮೀಟಿ ಜಖಂಗೊಳಿಸಿ ತೆರೆದು ಗೋಡ್ರೇಜ್ನಲ್ಲಿದ್ದ 6000ರೂ. ಮತ್ತು ಕಾಣಿಕೆ ಹುಂಡಿಯಲ್ಲಿದ್ದ 5000 ರೂ. ಒಟ್ಟು ರೂಪಾಯಿ 11ಸಾವಿರ ರೂ. ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story