ಬೋಟಿನಿಂದ ಬಿದ್ದು ಮೀನುಗಾರ ಮೃತ್ಯು
ಮಲ್ಪೆ, ಅ.7: ಅಕಸ್ಮಿಕವಾಗಿ ಕಾಲುಜಾರಿ ಬೋಟಿನಿಂದ ಧಕ್ಕೆಯ ನೀರಿಗೆ ಬಿದ್ದ ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.
ಮೃತರನ್ನು ರಮೇಶ್ ಕೋಟ್ಯಾನ್ (೭೫) ಎಂದು ಗುರುತಿಸಲಾಗಿದೆ. ಇವರು ದೇವದಾಸ್ ಮಾಲಕತ್ವದ ಗುರುರಾಘವೇಂದ್ರ ಬೋಟಿನಲ್ಲಿ ಕಲಾಸಿ ಆಗಿ ಕೆಲಸ ಮಾಡುತಿದ್ದರು. ಇಂದು ಬೆಳಗಿನ ಜಾವ 4ಗಂಟೆಗೆ ಮೀನುಗಾರಿಕೆಗೆಂದು ತೆರಳಿದ್ದಾಗ ಘಟನೆ ನಡೆದಿದೆ. ರಮೇಶ್ ಕೋಟ್ಯಾನ್ ಇವರ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story