ನದಿಗೆ ಬಿದ್ದು ಯುವಕ ನಾಪತ್ತೆ
ಗಂಗೊಳ್ಳಿ : ಅ.26ರಂದು ಗಂಗೊಳ್ಳಿಯ ಪಂಚಗಂಗಾವಳಿ ನದಿಯಲ್ಲಿ ಮೀನುಗಾರಿಕೆ ತೆರಳಿದ ಸಾಗರದೀಪಾ ಬೋಟ್ನಲ್ಲಿದ್ದ ರಘುವೀರ ತಾಂಡೇಲ (28) ಎಂಬ ಯುವಕ ಅಕಸ್ಮಿಕವಾಗಿ ಆಯತಪ್ಪಿ ಬೋಟ್ನಿಂದ ಪಂಚಗಂಗಾವಳಿ ನದಿಗೆ ಬಿದ್ದು ನಾಪತ್ತೆಯಾಗಿರುವುದಾಗಿ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನದಿಯಲ್ಲಿ ಸತತವಾಗಿ ಹುಡುಕಾಡಿದ್ದರೂ ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Next Story