ಉಡುಪಿ ಕಾಂಗ್ರೆಸ್ ಭವನದಲ್ಲಿ ಸಂವಿಧಾನ ದಿನಾಚರಣೆ
ಉಡುಪಿ: ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಸಂವಿಧಾನ ದಿನವನ್ನು ಉಡುಪಿ ಕಾಂಗ್ರೆಸ್ ಭವನದಲ್ಲಿ ಶನಿವಾರ ಆಚರಿಸಲಾಯಿತು.
ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉದ್ಯಾವರ ನಾಗೇಶ್ ಕುಮಾರವರು ಸಂವಿಧಾನದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕಿ ರೋಶ್ನಿ ಒಲಿವರ್ ಪಕ್ಷದ ಸಂಘಟನೆಯ ಕುರಿತು ಮಾತನಾಡಿದರು.
ಕೆಪಿಸಿಸಿ ಫ್ಯಾನ್ಲಿಸ್ಟ್ ವೆರೋನಿಕಾ ಕರ್ನೇಲಿಯೋ ಸರಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪಂಚಾ ಯತ್ರಾಜ್ ಸಂಘಟನೆಯ ಕಾರ್ಕಳ ಬ್ಲಾಕ್ ಸಂಯೋಜಕರಾಗಿ ನೇಮಕ ಗೊಂಡ ಜೋಯ್ಸ್ ಟೆಲ್ಲೀಸ್ರವರಿಗೆ ಆದೇಶ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ರೋಶನ್ ಶೆಟ್ಟಿ, ಫಾ.ವಿಲಿಯಮ್ ಮಾರ್ಟಿಸ್, ಕುಶಲ ಶೆಟ್ಟಿ, ಕೀರ್ತಿ ಶೆಟ್ಟಿ, ಅಮೃತ ಪೂಜಾರಿ, ಸುರೇಶ ಶೆಟ್ಟಿ, ಆನಂದ ಪೂಜಾರಿ, ಸುದೀರ್, ಐರಿನ್ ಅಂದ್ರಾದೆ, ಶಬರಿಸ್, ಸುನೀಲ ಬಂಗೇರ, ಸುಗಂಧಿ ಶೇಖರ, ಚಂದ್ರವತಿ ಭಂಡಾರಿ, ಉದಯ, ತಾರಾ, ಗ್ರಾಪಂ ಸದಸ್ಯರುಗಳು ಹಾಗೂ ಸಂಯೋಜಕರು ಗಳು ಉಪಸ್ಥಿತರಿದ್ದರು.