ಉಡುಪಿ: ಆಭರಣ ತಯಾರಿಕಾ ಘಟಕಕ್ಕೆ ನುಗ್ಗಿ ಕಳವು
ಉಡುಪಿ, ನ.26: ಕೆಳಾರ್ಕಳಬೆಟ್ಟುವಿನಲ್ಲಿರುವ ಸ್ವರ್ಣೊದ್ಯಮ ಆಭರಣ ತಯಾರಿಕಾ ಸಂಸ್ಥೆಯ ಘಟಕಕ್ಕೆ ನ.25ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಆಭರಣ ತಯಾರಿಕ ಘಟಕದ ಬೀಗ ಮುರಿದು ಒಳನುಗ್ಗಿದ ಕಳ್ಳರು, ಆಭರಣ ತಯಾರಿಸಲು ಇಟ್ಟಿದ್ದ ಚಿನ್ನ ಹಾಗೂ ಅರ್ಧ ತಯಾರಿಸಿದ ನೆಕ್ಲೆಸ್ ಹಾಗೂ ಮೇಣದಲ್ಲಿ ಇರಿಸಿದ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ 126 ಗ್ರಾಂ ಚಿನ್ನದ ಮೌಲ್ಯ 6,30,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story