ಕುಂದಾಪುರ: ಅಕ್ಕಿ ಅಕ್ರಮ ಸಾಗಾಟ; ಓರ್ವನ ಬಂಧನ
ಕುಂದಾಪುರ, ನ.26: ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಓರ್ವನನ್ನು ಆಹಾರ ನಿರೀಕ್ಷಕರ ನೇತೃತ್ವದ ತಂಡ ಹೆಮ್ಮಾಡಿ ಗ್ರಾಮದ ಸಂತೋಷ ನಗರ ಎಂಬಲ್ಲಿ ನ.25ರಂದು ರಾತ್ರಿ ವೇಳೆ ಬಂಧಿಸಿದೆ.
ವಾಹನ ಚಾಲಕ ನಾವುಂದ ಬಡಾಕೆರೆಯ ವಿಜಯ ಟಿ ಪೂಜಾರಿ (39) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನದಲ್ಲಿದ್ದ 22 ಸಾವಿರ ರೂ. ಮೌಲ್ಯದ ಒಟ್ಟು 1000 ಕೆ.ಜಿ ತೂಕದ ಅಕ್ಕಿ ಹಾಗೂ 1.30 ಲಕ್ಷ ರೂ. ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story