ಬ್ರಹ್ಮಾವರ: ಸೊಸೈಟಿ ನೋಟಿಸ್ನಿಂದ ನೊಂದು ರಿಕ್ಷಾ ಚಾಲಕ ಆತ್ಮಹತ್ಯೆ
ಬ್ರಹ್ಮಾವರ, ಡಿ.3: ಸಾಲ ಮರುಪಾವತಿ ಸಂಬಂಧ ಬಂದ ಸೊಸೈಟಿ ನೋಟೀಸ್ನಿಂದ ಮನನೊಂದ ರಿಕ್ಷಾ ಚಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸೂರು ಗ್ರಾಮದ ತಡಾಲು ಎಂಬಲ್ಲಿ ನಡೆದಿದೆ.
ಮೃತರನ್ನು ಹೊಸೂರು ಗ್ರಾಮದ ಕರ್ಜೆ ನಿವಾಸಿ ವನಜ ಪೂಜಾತ್ತಿ ಎಂಬವರ ಮಗ ಪ್ರಕಾಶ (23) ಎಂದು ಗುರುತಿಸಲಾಗಿದೆ.
ರಿಕ್ಷಾ ಮಾರಾಟ ಮಾಡಿ ಮನೆಯಲ್ಲಿಯೇ ಇದ್ದು ಮದ್ಯ ಸೇವನೆ ಮಾಡಿಕೊಂಡಿದ್ದ ಪ್ರಕಾಶ್, ಪೇತ್ರಿ ಸೊಸೈಟಿ ಯಿಂದ 1 ಲಕ್ಷ ಸಾಲ ಪಡೆದುಕೊಂಡಿದ್ದನು. 2 ವಾರಗಳ ಹಿಂದೆ ಸಾಲ ಮರು ಪಾವತಿಯ ಬಗ್ಗೆ ಮನೆಗೆ ನೋಟಿಸು ಬಂದಿದ್ದು, ಇದರಿಂದ ಬೇಸರ ಗೊಂಡು ನ.30ರಿಂದ ಡಿ.2ರ ಮಧ್ಯಾವಧಿಯಲ್ಲಿ ಹಾಡಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story