ಮಲ್ಪೆ: ಬೆಂಕಿ ಅಕಸ್ಮಿಕದಿಂದ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು
ಮಲ್ಪೆ: ಕೊಡವೂರು ಜುಮಾದಿನಗರ ಎಂಬಲ್ಲಿ ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಜುಮಾದಿನಗರದ ಪ್ರಕಾಶ ತಿಂಗಳಾಯ(48) ಎಂದು ಗುರುತಿಸಲಾಗಿದೆ. ಇವರು ಜ.29ರಂದು ಸಂಜೆ ಮನೆಯಲ್ಲಿ ಸೊಳ್ಳೆ ಓಡಿಸಲು ಬೆಂಕಿ ಹಚ್ಚುತ್ತಿರುವ ವೇಳೆ ಟರ್ಪೆಂಟ್ ಆಯಿಲ್ ಟಿನ್ ಆಕಸ್ಮಿಕವಾಗಿ ಬೆಂಕಿಗೆ ತಾಗಿತ್ತೆನ್ನಲಾಗಿದೆ. ಇದರಿಂದ ಟಿನ್ ಸ್ಪೋಟಗೊಂಡ ಪರಿಣಾಮ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದರು.
ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಫೆ.5ರಂದು ಬೆಳಗಿನ ಜಾವ ಮೃತಪಟ್ಟರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story