ಹುತಾತ್ಮರ ದಿನಾಚರಣೆ: ಜಗತ್ತನ್ನು ಅಹಿಂಸಾವಾದದ ಮೂಲಕವೇ ಬದಲಾಯಿಸಿದ ಮಹಾತ್ಮಾ ಗಾಂಧಿ
-

ಬ್ರಿಟಿಷರ ಅಧೀನದಿಂದ ಭಾರತ ಸ್ವತಂತ್ರವಾಗಲು ಶಾಂತಿಯುತ ನಾಗರಿಕ ಅಸಹಕಾರವೇ ಸರಿಯಾದ ಹೋರಾಟ ಎಂದು ಭಾವಿಸಿ, ಅದರಂತೆ ಭಾರತೀಯರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಮುನ್ನಡೆಸಿದ ಪರಿಣಾಮವಾಗಿ ಮಹಾತ್ಮಾ ಗಾಂಧಿಯವರು ರಾಷ್ಟ್ರಪಿತ ಎನಿಸಿಕೊಂಡರು. ಅವರು ಆಧುನಿಕ ಭಾರತದ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದರು. ಜನವರಿ 30 ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಾಗಿದ್ದು, 1948ರ ಈ ದಿನ ಮಹಾತ್ಮಾ ಗಾಂಧಿ ಹತ್ಯೆಗೀಡಾದರು.
ಅವರ ಸ್ಮೃತಿ ದಿನವನ್ನು ನೆನೆಯಲು ಭಾರತದಲ್ಲಿ ಜನವರಿ 30ನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಮಹಾತ್ಮಾ ಗಾಂಧಿಯವರ ಅಂತಿಮ ಸಂಸ್ಕಾರ ನೆರವೇರಿಸಿದ, ಅವರ ಸ್ಮಾರಕ ನಿರ್ಮಿಸಲಾದ ದೆಹಲಿಯ ರಾಜ್ಘಾಟ್ನಲ್ಲಿ ಸಾವಿರಾರು ಜನರು, ರಾಜಕಾರಣಿಗಳು ಈ ದಿನ ಗೌರವ ನಮನ ಸಲ್ಲಿಸುತ್ತಾರೆ.
ಇಡೀ ಜಗತ್ತು ಗಾಂಧೀಜಿಯನ್ನು ಶಾಂತಿ, ನ್ಯಾಯ ಮತ್ತು ಸ್ವಾತಂತ್ರ್ಯದ ಸಂಕೇತವಾಗಿ ನೋಡುತ್ತದೆ. ಗಾಂಧೀಜಿ 1869ರ ಅಕ್ಟೋಬರ್ 2ರಂದು ಗುಜರಾತಿನ ಕರಾವಳಿ ಪಟ್ಟಣವಾದ ಪೋರಬಂದರಿನಲ್ಲಿ ಜನಿಸಿದರು. ಅವರು ಬ್ರಿಟನ್ನಲ್ಲಿ ಕಾನೂನು ವ್ಯಾಸಂಗ ನಡೆಸಿ ಭಾರತಕ್ಕೆ ಮರಳಿದ ಬಳಿಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿ ತನ್ನ ಸಾಮಾಜಿಕ ಜೀವನವನ್ನು ಆರಂಭಿಸಿದರು. ಆಗಿನ ಕಾಂಗ್ರೆಸ್ ಭಾರತದ ಪ್ರಮುಖ ರಾಜಕೀಯ ಪಕ್ಷವಾಗಿತ್ತು.
ಗಾಂಧೀಜಿ ತನ್ನ ಅಹಿಂಸಾ ವಾದವನ್ನು ಸತ್ಯಾಗ್ರಹ ಎಂಬ ಹೆಸರಿನಿಂದ ಕರೆಯುತ್ತಿದ್ದರು. ವಿವಿಧ ವಿವಾದಗಳನ್ನು ಶಾಂತಿಯುತ ಮಾರ್ಗದಿಂದ ಪರಿಹರಿಸುವ ನಿಟ್ಟಿನಿಂದ ಗಾಂಧೀಜಿಯ ಅಹಿಂಸಾ ವಾದವನ್ನು ಇಂದಿಗೂ ಅಧ್ಯಯನ ಮಾಡಲಾಗುತ್ತಿದೆ. ಗಾಂಧೀಜಿ ಯಾವುದೇ ರೀತಿಯ ಅತಿಕ್ರಮಣವನ್ನು ಅಹಿಂಸಾವಾದದ ಮೂಲಕವೇ ಎದುರಿಸಲು ಸಾಧ್ಯ, ಮತ್ತು ಹಿಂಸಾ ಮಾರ್ಗದಿಂದ ಹೆಚ್ಚು ಹೆಚ್ಚು ಹಿಂಸೆಯಷ್ಟೇ ಉಂಟಾಗುತ್ತದೆ ಎಂದು ನಂಬಿದ್ದರು. ಅವರು ಕೆಟ್ಟದ್ದನ್ನು ಪ್ರೀತಿ ಮತ್ತು ಅಹಿಂಸೆಯಿಂದ ಗೆಲ್ಲಲು ಸಾಧ್ಯ ಎಂದಿದ್ದರು.
ಮಹಾತ್ಮಾ ಗಾಂಧಿಯವರ ಅಸಹಕಾರ ಚಳವಳಿಯ ಪ್ರಸಿದ್ಧ ಘಟನೆಯೆಂದರೆ ಅವರು 1930ರಲ್ಲಿ ನಡೆಸಿದ ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ. ಉಪ್ಪಿನ ಉತ್ಪಾದನೆಯಲ್ಲಿ ಬ್ರಿಟಿಷರ ಏಕಸ್ವಾಮ್ಯದ ವಿರುದ್ಧ ಪ್ರತಿಭಟನಾ ರೂಪದಲ್ಲಿ ಗಾಂಧೀಜಿ ಅಹಮದಾಬಾದ್ನಿಂದ ಅರಬ್ಬಿ ಸಮುದ್ರದ ತನಕ ಸಾವಿರಾರು ಜನರ ಯಾತ್ರೆಯ ನೇತೃತ್ವ ವಹಿಸಿದ್ದರು. ಅಲ್ಲಿ ಬ್ರಿಟಿಷ್ ಕಾನೂನಿಗೆ ವಿರುದ್ಧವಾಗಿ ಪ್ರತಿಭಟನಾಕಾರರು ಸಮುದ್ರ ದಡದಲ್ಲಿ ಉಪ್ಪು ಸಂಗ್ರಹಿಸಿದರು. ಉಪ್ಪಿನ ಸತ್ಯಾಗ್ರಹ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಒಂದು ಪರಿಣಾಮಕಾರಿ ಘಟನೆಯಾಗಿದ್ದು, ಭಾರತದ ಸ್ವಾತಂತ್ರಕ್ಕಾಗಿ ಅಪಾರ ಬೆಂಬಲ ಗಳಿಸಿತು.
ಗಾಂಧೀಜಿಯವರ ಚಿಂತನೆಗಳು ಜಗತ್ತಿನಾದ್ಯಂತ ಹಲವು ಚಳವಳಿಗೆ ಪ್ರೇರಣೆ ನೀಡಿದ್ದವು. ಅವುಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನೇತೃತ್ವದಲ್ಲಿ ನಡೆದ ಅಮೆರಿಕಾದ ನಾಗರಿಕ ಹಕ್ಕು ಹೋರಾಟ, ನೆಲ್ಸನ್ ಮಂಡೇಲಾ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವರ್ಣಭೇದ ನೀತಿ ವಿರೋಧಿ ಹೋರಾಟಗಳು ಪ್ರಮುಖವಾದವು. ಕಿಂಗ್ ಗಾಂಧೀಜಿಯ ಚಿಂತನೆಗಳು ಮತ್ತು ವಿಧಾನಗಳಿಂದ ಪ್ರಭಾವಿತರಾಗಿ, ಅಹಿಂಸೆಯ ಮೂಲಕ ಆಫ್ರಿಕನ್ ಅಮೆರಿಕನ್ನರಿಗೆ ಅಮೆರಿಕಾದಲ್ಲಿ ಸಮಾನ ನಾಗರಿಕ ಹಕ್ಕುಗಳನ್ನು ಸಾಧಿಸಲು ಹೋರಾಡಿದರು. ವರ್ಣಭೇದ ನೀತಿಯ ವಿರುದ್ಧ ಹೋರಾಡಿ, 27 ವರ್ಷಗಳನ್ನು ಸೆರೆಮನೆಯಲ್ಲಿ ಕಳೆದ ನೆಲ್ಸನ್ ಮಂಡೇಲಾ ಸಹ ತಾನು ಗಾಂಧೀಜಿಯಿಂದ ಪ್ರಭಾವಿತರಾಗಿದ್ದಾಗಿ ಹೇಳಿದ್ದರು.
2007ರಲ್ಲಿ ವಿಶ್ವಸಂಸ್ಥೆ ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2ನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಘೋಷಿಸಿತು. ಆ ದಿನ ಗಾಂಧಿಯವರ ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ನೆನೆಯಲು, ಆಚರಣೆಗೆ ತರುವ ನಿರ್ಧಾರ ಕೈಗೊಳ್ಳುವ ದಿನವಾಗಿದೆ.
ಗಾಂಧೀಜಿಯವರು ದೈಹಿಕವಾಗಿ ಅಸುನೀಗಿದ್ದರೂ, ಸ್ವತಂತ್ರ, ನ್ಯಾಯಬದ್ಧ, ಹಾಗೂ ಶಾಂತಿಯುತ ಭಾರತದ ಕುರಿತ ಅವರ ಯೋಚನೆಗಳು ಇಂದಿನ ತಲೆಮಾರಿಗೂ ಸ್ಫೂರ್ತಿಯಾಗಿದೆ. ಅವರ ಬೋಧನೆಗಳು ಜಗತ್ತಿನ ಮೇಲೆ ಅಪಾರ ಪರಿಣಾಮ ಬೀರಿವೆ. ಅವು ಇಂದಿಗೂ ಅಹಿಂಸೆಯ ಶಕ್ತಿಯನ್ನು ಸಾರುತ್ತಿವೆ.
ಮಹಾತ್ಮಾ ಗಾಂಧಿಯವರ ಸ್ಮೃತಿದಿನವಾದ ಇಂದು ಅವರ ಜೀವನ ಮತ್ತು ಸಂದೇಶಗಳನ್ನು ಕುರಿತು ಚಿಂತಿಸುವ ದಿನವಾಗಿದೆ. ಅದರೊಡನೆ, ಅವರು ಜೀವನದುದ್ದಕ್ಕೂ ಪ್ರತಿಪಾದಿಸಿದ ಶಾಂತಿ, ನ್ಯಾಯ, ಹಾಗೂ ಅಹಿಂಸೆಗಳನ್ನು ಆಚರಣೆಗೆ ತರುವ ದಿನವೂ ಆಗಿದೆ. ಗಾಂಧೀಜಿ ಇಂದು ನಮ್ಮೊಡನೆ ಇಲ್ಲದಿದ್ದರೂ, ಅವರ ಬೋಧನೆಗಳು ಜಗತ್ತಿನ ಎಲ್ಲ ಜನರನ್ನೂ ಒಂದಾಗುವಂತೆ ಮಾಡಲು, ಶಾಂತಿಯುತ ಜಗತ್ತಿನೆಡೆಗೆ ಸಾಗಲು ಪ್ರೇರೇಪಿಸುತ್ತವೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.