ಕಲಬುರಗಿ | ಸತತ ಅಧ್ಯಯನದಿಂದ ವಿದ್ಯಾರ್ಥಿಗಳ ಜೀವನ ವಿಕಾಸ : ಡಾ.ಗುರು ಶ್ರೀರಾಮುಲು

ಕಲಬುರಗಿ : ವಿದ್ಯಾರ್ಥಿಗಳ ಜೀವನ ವಿಕಸನವಾಗಬೇಕಾದರೆ ಸತತ ಅಭ್ಯಾಸ ನಡೆಸಬೇಕು ಮತ್ತು ನಿರಂತರ ಪ್ರಯತ್ನದಿಂದ ಯಶಸ್ಸನ್ನು ಪಡೆಯಬೇಕೆಂದು ಗುಲ್ಬಾರ್ಗ ವಿಶ್ವವಿದ್ಯಾಲಯದ ಕುಲಪತಿ ಡಾ.ಗುರು ಶ್ರೀರಾಮುಲು ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯ (ಸ್ವಾಯತ್ತ)ಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಎನ್ ಎಸ್ ಎಸ್, ಎನ್ ಸಿಸಿ, ರೇಂಜರ್ಸ್ ಮತ್ತು ರೋವರ್ಸ್, ರೆಡ್ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಘಟಕಗಳು ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಕೊಡ್ಲಾದ ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳನ್ನು ಪಾಲಿಸಿಕೊಂಡು ಜೀವನದಲ್ಲಿ ಶಿಕ್ಷಣದ ಮಹತ್ವವನ್ನು ಅರಿತು ಸಾಧನೆ ಮಾಡಲು ಪ್ರಯತ್ನಿಸಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರದ ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ ಮತ್ತು ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಹಾಗೂ ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಿ ಮುಂದೆ ಬರಲು ಪ್ರಯತ್ನಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಡಾ.ಮಲ್ಲೇಶಪ್ಪ ಎಸ್ ಕುಂಬಾರ, ಡಾ.ವಿಜಯಕುಮಾರ ಸಾಲಿಮನಿ ಡಾ. ರಾಜಕುಮಾರ ಸಲಗರ, ಡಾ.ದವಲಪ್ಪ ಹೆಚ್ , ಡಾ.ಅರುಣಕುಮಾರ ಸಲಗರ, ಡಾ.ರಾಜಶೇಖರ್ ಮಡಿವಾಳ, ಡಾ.ಶ್ರೀಮಂತ ಹೋಳಕರ, ಡಾ.ಸುರೇಶ ಎಸ್ ಮಾಳೇಗಾಂವ ,ಡಾ.ಬಲಭೀಮ ಸಾಂಗ್ಲಿ ,ಡಾ.ನಾಗಪ್ಪ ಟಿ ಗೋಗಿ, ಡಾ.ಶಿವಲಿಂಗಪ್ಪ ಪಾಟೀಲ, ಡಾ.ಬಸಂತ ಸಾಗರ, ಡಾ.ರವಿ ಬೌದ್ದೆ , ಪ್ರೊ.ರಹಮಾನ ಮಹ್ಮದ ಸಾಬ, ಡಾ.ವಿಜಯಕುಮಾರ ಗೋಪಾಳೆ, ಪ್ರೊ.ದಿನೇಶ್ ಮೇತ್ರೆ ಡಾ. ವಿಜಯಲಕ್ಷ್ಮಿ ಪಾಟೀಲ, ಡಾ.ವಿಜಯಾನಂದ ವಿಠಲರಾವ, ಡಾ.ಮೀನಾಕ್ಷಿ, ಡಾ.ನಶೀಮ ಫಾತಿಮಾ, ಡಾ.ನಾಗಜ್ಯೋತಿ, ಡಾ.ಶ್ಯಾಮಲಾ ಸ್ವಾಮಿ , ಡಾ.ಸುಜಾತಾ ದೊಡ್ಡಮನಿ, ಡಾ.ಭಾಗ್ಯಲಕ್ಷ್ಮಿ, ಡಾ.ರಬಿಯಾ ಇಫತ್,ಡಾ.ಗೌಶಿಯಾ ಬೇಗಂ ಹಾಗೂ ಅಜಯ್ ಸಿಂಗ್ ತಿವಾರಿ, ಶಿವಾನಂದ ಸ್ವಾಮಿ ಮತ್ತು ಕಾಲೇಜಿನ ಬೋಧಕ - ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪೂಜಾ ಚವ್ಹಾಣ , ಸಪ್ನಾ ರೆಡ್ಡಿ ,ಅರ್ಜುನ, ಪಲ್ಲವಿ, ಧರ್ಮರಾಜ ವಿದ್ಯಾರ್ಥಿಗಳಿಗೆ ಗಣ್ಯರಿಂದ ಸನ್ಮಾನಿಸಲಾಯಿತು.
ಡಾ. ಶ್ಯಾಮಲಾ ಸ್ವಾಮಿಯವರು ಪ್ರಾರ್ಥಿಸಿದರು. ಡಾ. ವಿಜಯಕುಮಾರ ಸಾಲಿಮನಿ ಸ್ವಾಗತಿಸಿದರು. ಡಾ.ಶ್ರೀಮಂತ ಹೋಳಕರ ಪ್ರಾಸ್ತಾವಿಕ ಮಾತನಾಡಿದರು. ಡಾ. ಸುರೇಶ ಎಸ್ ಮಾಳೆಗಾಂವ ವಂದಿಸಿದರು. ಡಾ.ಬಲಭೀಮ ಸಾಂಗ್ಲಿಯವರು ನಿರೂಪಿಸಿದರು.







