ಕಲಬುರಗಿ| ಸಿಸಿ ರಸ್ತೆ ಕಾಮಗಾರಿಗಳಿಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಶಿಲಾನ್ಯಾಸ

ಕಲಬುರಗಿ: ದಕ್ಷಿಣ ಮತಕ್ಷೇತ್ರದ ಶಾಸಕರಾಗಿರುವ ಅಲ್ಲಂಪ್ರಭು ಪಾಟೀಲ ಅವರು ತಮ್ಮ ವ್ಯಾಪ್ತಿಯಲ್ಲಿ ಬರುವ ಶರಣಸಿರಸಗಿ ಬಳಿಯ ಜಿಲ್ಲಾ ಆದಿ ಬಣಜಿಗ ಸಂಘದ ಕಾಲೋನಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಜಿಲ್ಲಾ ಖನೀಜ ನಿಧಿಯ ಅನುದಾನದಲ್ಲಿ ಶಾಸಕರು ಶರಣಸಿರಸಗಿ ಗ್ರಾಮದಲ್ಲಿರುವ ಬಣಜಿಗ ಸಂಘದ ಬಡಾವಣೆಯಲ್ಲಿ 10 ಲಕ್ಷ ಸಿಸಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿವುಪುತರಪ ಬರೋಡೆ, ಪ್ರಕಾಶ ಪಾಟೀಲ್ ಹೀರಾಪುರ, ಭೀಮರಾವ್ ಮೇಳಕುಂದ, ಕಲ್ಯಾಣರಾವ್ ಪಾಟೀಲ್,ಮಹದೇವಪ್ಪ ಪಾಟೀಲ್, ಸತೀಶ್ ಪಾಟೀಲ್, ಸೋಮಶೇಖರ್, ರಾಜು ನಾವಲ್ಡಿ, ಸಿದ್ರಾಮ್ ಯಲ್ವಂತ್ಗಿ, ಗಂಗಾದರ ಮುನ್ನಾಲಿ, ವಿಶ್ವನಾಥ ಪಾಟೀಲ್, ರಾಜಶೇಖರ್ ಶೆಟ್ಟಿ, ಗುಂಡೂರಾವ್ ಪದ್ಮಾಜಿ, ಸೇರಿದಂತೆ ಇತರರು ಹಾಜರಿದ್ದರು.
Next Story





