ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ: ಶಾಸಕ ಅಲ್ಲಮಪ್ರಭು ಪಾಟೀಲ್

ಕಲಬುರಗಿ: ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ, ಅಂತಹ ಪ್ರತಿಭೆಯನ್ನು ಪಡೆದ ಮಕ್ಕಳು ತಮ್ಮ ಪಾಲಕರು ಹಾಗೂ ಊರಿನ, ಬಡಾವಣೆಯ ಹೆಸರು ತರಬೇಕು ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದ್ದಾರೆ.
ಇಲ್ಲಿನ ಸದಾಶಿವ ನಗರದ ಗಣೇಶ ವಿಸರ್ಜನಾ ದಿನದಂದು ಬಡಾವಣೆಯ ಹತ್ತನೇ ಮತ್ತು ಪಿ.ಯು.ಸಿ.ಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಮೂರು ದಿನಗಳ ಕಾಲ ಪ್ರಸಾದ ಸೇವೆ ಸಲ್ಲಿಸಿದ ಮಹನಿಯರನ್ನು ಗೌರವಿಸಲಾಯಿತು. ಪ್ರಧಾನ ಅರ್ಚಕ ವಿವೇಕಸ್ವಾಮಿ ದಂಪತಿಗಳನ್ನು ಸಮಿತಿಯ ಪರವಾಗಿ ಗೌರವಿಸಲಾಯಿತು.
ವೇದಿಕೆಯಲ್ಲಿ ದಕ್ಚಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಚ ಲಿಂಗರಾಜ ತಾರಫೈಲ್, ಹಾವೇಂದ್ರ ಪುಣ್ಯಶೆಟ್ಟಿ ಡಾ.ಮುದ್ದಾ, ಅಮೀನರಡ್ಡಿ, ಡಾ.ಮಲ್ಲಿಕಾರ್ಜುನ ಚಿಕ್ಕಪಾಟೀಲ ಉಪಸ್ಥಿತರಿದ್ದರು.
ವೀರಣ್ಣ ಗುಗ್ವಾಡ್ ನಿರೂಪಿಸಿದರು. ವೀರಭದ್ರಪ್ಪ ಪಾಟೀಲ ವಂದಿಸಿದರು. ಸದಾಶಿವ ನಗರ, ನವಜೀವನ ನಗರ, ಮೋಹನ್ ನಗರ, ಗಾಬರೇ ಲೇಔಟ ನ ನಿವಾಸಿಗಳು ಮಹಿಳೆಯರು ಮಕ್ಕಳು ಇದ್ದರು.







