Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶೇರ್ ಅಲಿ- ವೈಸರಾಯ್ ಮೇಯೋನ ಹತ್ಯೆಗೈದ...

ಶೇರ್ ಅಲಿ- ವೈಸರಾಯ್ ಮೇಯೋನ ಹತ್ಯೆಗೈದ ಕ್ರಾಂತಿಕಾರಿ: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಸುರೇಶ್ ಕಂಜರ್ಪಣೆಸುರೇಶ್ ಕಂಜರ್ಪಣೆ7 Dec 2025 1:00 PM IST
share
ಶೇರ್ ಅಲಿ- ವೈಸರಾಯ್ ಮೇಯೋನ ಹತ್ಯೆಗೈದ ಕ್ರಾಂತಿಕಾರಿ: ಇವರಾರೂ ಕ್ಷಮೆ ಯಾಚಿಸಲಿಲ್ಲ!
ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

ಭಾಗ - 5

ಬ್ರಿಟಿಷ್ ವಿರುದ್ಧದ ಹೋರಾಟಗಲ್ಲಿ ಬ್ರಿಟಿಷ್‌ಅಧಿಕಾರಿಗಳ ಹತ್ಯೆ ಆರಂಭಿಕ ಕ್ರಾಂತಿಕಾರಿ ಚಟುವಟಿಕೆಗಳ ಮಹತ್ತರ ತಂತ್ರ. ದಮನಕಾರಿ ಬ್ರಿಟಿಷ್ ಅಧಿಕಾರಿಗಳ ಹತ್ಯೆಯ ಮೂಲಕ ವಸಾಹತುಶಾಹಿ ಆಡಳಿತಕ್ಕೆ ಭೀತಿ ಹುಟ್ಟಿಸುವ ತಂತ್ರ ಇದು.

ಖುದಿರಾಮ್ ಬೋಸ್, ಭಗತ್‌ಸಿಂಗ್ ಸಹಿತ ಹಲವಾರು ಕ್ರಾಂತಿಕಾರಿಗಳು ಗಲ್ಲಿಗೇರಿದ್ದು ಈ ಕೃತ್ಯಗಳ ಮೂಲಕ.

ಭಾರತದ ಅತ್ಯುಚ್ಚ ವಸಾಹತುಶಾಹಿ ಅಧಿಕಾರಿಯಾಗಿದ್ದ ವೈಸರಾಯ್ ಹತ್ಯೆಯ ಪ್ರಯತ್ನಗಳೂ ನಡೆದಿದ್ದವು. ಇರ್ವಿನ್ ಕೊಲೆ ಸಂಚು ಕೂಡಾ ಇದರಲ್ಲೊಂದು. ಆದರೆ ಭಾರತದ ವೈಸರಾಯ್ ಒಬ್ಬರು ಕೊಲೆಯಾದ ಪ್ರಕರಣದ ಬಗ್ಗೆ ಬಹುತೇಕರಿಗೆ ಗೊತ್ತಿರಲಾರದು. ಲಾರ್ಡ್ ಮೇಯೋ 1860-70ರ ಅವಧಿಯಲ್ಲಿ ಭಾರತದ ವೈಸರಾಯ್ ಆಗಿದ್ದವರು. ಬಲು ದಮನಕಾರಿ ಪ್ರವೃತ್ತಿಯ ಮನುಷ್ಯ ಕೂಡಾ.

ಈ ಮೇಯೋ ಅಂಡಮಾನ್‌ನ ಸ್ಥಿತಿ-ಗತಿ ಬಗ್ಗೆ ಇನ್‌ಸ್ಪೆಕ್ಷನ್ ನಡೆಸಲು ಅಂಡಮಾನಿಗೆ ಹೋಗಿದ್ದ. ಮುಸ್ಸಂಜೆ ಜನರು ನೋಡನೋಡುತ್ತಿದ್ದಂತೆ ಅನಾಮಿಕನಂತಿದ್ದ ವ್ಯಕ್ತಿಯೊಬ್ಬ ಹಠಾತ್ತಾಗಿ ನುಗ್ಗಿ ಮೇಯೋಗೆ ಹಿಂದಿನಿಂದ ಇರಿದ. ಆ ಗಾಬರಿಯಲ್ಲಿ ಅಲ್ಲಿದ್ದ ದೊಂದಿ ಬೆಳಕೂ ಆರಿ ಹೋಗಿ, ಅಂತೂ ಈ ದಾಳಿಕೋರನನ್ನು ಸೆರೆ ಹಿಡಿಯಲಾಯಿತು. ಆದರೆ ಆಳವಾಗಿ ಗಾಯವಾಗಿದ್ದ ಮೇಯೋ ಅಲ್ಲೇ ಕೊನೆ ಉಸಿರೆಳೆದ.

ಯಾರು ಈ ದಾಳಿ ನಡೆಸಿದ್ದು?

ನಾವು ಮರೆತ ಕ್ರಾಂತಿಕಾರಿಗಳಲ್ಲಿ ಈತನೂ ಒಬ್ಬ. ಶೇರ್ ಅಲಿ ಈ ಕ್ರಾಂತಿಕಾರಿ. ಮೂಲತಃ ಜಮ್ರೂದ್ ಕಣಿವೆಯ ಅಫ್ರಿದಿ ಕುಲಕ್ಕೆ ಸೇರಿದ್ದ ಈತ ಬ್ರಿಟಿಷ್ ಸೇವೆಯಲ್ಲೇ ಇದ್ದವನು. ಪೇಶಾವರದಲ್ಲಿದ್ದಾಗ ಕುಲ ವೈಷಮ್ಯದ ಹಿನ್ನೆಲೆಯಲ್ಲಿ ತನ್ನ ಎದುರಾಳಿಯೊಬ್ಬನನ್ನು ಹತ್ಯೆಗೈದಿದ್ದಕ್ಕಾಗಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಅಂಡಮಾನ್‌ಗೆ ಕಳಿಸಲಾಯಿತು.

ಅಂಡಮಾನ್‌ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಾ ಬಹುತೇಕ ಸಾದಾ ಸೀದವಾಗಿ ಇದ್ದ ಕಾರಣ ಬ್ರಿಟಿಷರು ಈತನಿಗೆ ಕ್ಷೌರಿಕನ ಕೆಲಸ ಕೊಟ್ಟಿದ್ದರು.

ಶೇರ್ ಅಲಿ ಮೆಯೋ ಬರುವುದು ಗೊತ್ತಾಗಿ ಆತನ ಹತ್ಯೆಗೆ ಕಾದು ಕೂತಿದ್ದ ಎನ್ನುವುದನ್ನು ಬ್ರಿಟಿಷರು ಬಿಡಿ ಸರೀಕ ಕೈದಿಗಳೂ ಊಹಿಸರಲಿಲ್ಲ.

ಹತ್ಯೆಯ ಮುನ್ನಾ ದಿನ ಆತ ಸಹ ಕೈದಿಗಳಿಗೆ ಸಿಹಿ ನೀಡಿ, ‘‘ನಾಳೆ ದಿನ ನಾನೊಂದು ಒಳ್ಳೆಯ ಕೆಲಸ ಮಾಡುವವನಿದ್ದೇನೆ. ನಿಮ್ಮ ಹರಕೆ ಬೇಕು’’ ಎಂದಿದ್ದ.

ಮಾರನೇ ದಿನ ಅಂದರೆ ಫೆಬ್ರವರಿ 8, 1872ರಂದು ಮೇಯೋ ಅಂಡಮಾನಿಗೆ ಬಂದು ಇನ್‌ಸ್ಪೆಕ್ಷನ್‌ಮುಗಿಸಿ ಮುಸ್ಸಂಜೆ ಹಡಗು ಹತ್ತುವ ವೇಳೆಗೆ ಶೇರ್ ಅಲಿ ಹಠಾತ್‌ಎರಗಿ ಚಾಕುವಿನಿಂದ ಇರಿದು, ಈ ಆಳ ಗಾಯದಿಂದಾಗಿ ಮೇಯೋ ಕೊನೆ ಉಸಿರೆಳೆದ.

ಶೇರ್ ಅಲಿಯನ್ನು ಬಂಧಿಸಲಾಯಿತು.

ಆತ ನಿರಾಳವಾಗಿದ್ದ. ಈತನಿಗೆ ಕುಮ್ಮಕ್ಕು ಇತ್ತೋ ಸಹಚರರು ಇದ್ದಾರೋ ಎಂದು ಬ್ರಿಟಿಷರು ಇನ್ನಿಲ್ಲದ ತನಿಖೆ ಮಾಡಿದ್ದರು.

ಆದರೆ ಯಾವ ಪುರಾವೆಗಳೂ ದೊರಕಲಿಲ್ಲ. ಒಂದು ತಿಂಗಳ ವಿಚಾರಣೆಯ ಬಳಿಕ ಶೇರ್ ಅಲಿಯನ್ನು 1872ರ ಮಾರ್ಚ್ 11ರಂದು ಗಲ್ಲಿಗೇರಿಸಲಾಯಿತು.

ಆತನಲ್ಲಿ ಕೇಳಿದರೆ ‘‘ದೇವರು ಹೇಳಿದ, ಕೊಂದೆ. ದೇಶದ ಶತ್ರುವನ್ನು ಕೊಂದೆ’’ ಎಂದಷ್ಟೇ ಹೇಳಿದ್ದ.

1971ರಲ್ಲಿ ಕೋಲ್ಕತಾದ ಕುಖ್ಯಾತ ನ್ಯಾಯಾಧೀಶ ಜಸ್ಟಿಸ್ ನಾರ್ಮನ್ ಅವರನ್ನು ಅಬ್ದುಲ್ಲಾ ಎಂಬ ಕ್ರಾಂತಿಕಾರಿ ಹತ್ಯೆ ಮಾಡಿದ್ದ. ಈ ಹತ್ಯೆಯ ಸಂಗತಿ ತಿಂಗಳುಗಳ ಬಳಿಕ ಶೇರ್‌ಅಲಿಗೂ ತಲುಪಿತ್ತು.

‘‘ನನ್ನ ಸಹೋದರನ ಕೃತ್ಯ ನನ್ನಲ್ಲೂ ಇದನ್ನು ಮಾಡಲು ಪ್ರೇರೇಪಿಸಿತು’’ ಎಂದು ಶೇರ್ ಅಲಿ ಹೇಳಿದ್ದ ಎಂಬ ವರದಿಗಳಿವೆ.

ಮುಸ್ಲಿಮ್ ಕ್ರಾಂತಿಕಾರಿಗಳ ಈ ಕೃತ್ಯಗಳು ನಮ್ಮನ್ನೆಲ್ಲಾ ಬಡಿದೆಬ್ಬಿಸಿದ್ದವು ಎಂದು ಮನ್ಮಥ ನಾಥ ಗುಪ್ತಾ, ಬಿಪಿನ್‌ಚಂದ್ರ ಪಾಲ್ ಹೇಳಿದ್ದಾರೆ.

ಈ ಕ್ರಾಂತಿಕಾರಿ ಚಟುವಟಿಕೆಗಳನ್ನು ವಹಾಬಿ ಅಭಿಯಾನದ ಕೆಲಸ ಎಂದು ಬ್ರಿಟಿಷ್ ಸರಕಾರ ಬಣ್ಣಿಸಿತು. ಮೂಲತಃ ಧಾರ್ಮಿಕ ವ್ಯವಹಾರ, ವಸಾಹತು ಶಾಹಿ ವಿರುದ್ಧ ಅಲ್ಲ ಎಂದು ಬಿಂಬಿಸುವುದು ಇದರ ಉದ್ದೇಶವಾಗಿತ್ತು.

ಈ ಮೇಯೋ ನೆನಪಲ್ಲಿ ಬೆಂಗಳೂರಲ್ಲೂ ಒಂದು ಹಾಲ್ ಇದೆ!! ಆದರೆ ಈತನನ್ನು ವಸಾಹತುಶಾಹಿ ದಮನದ ಪ್ರತಿನಿಧಿ ಎಂದು ಬಗೆದು ಹತ್ಯೆಗೈದ ಕ್ರಾಂತಿಕಾರಿಯ ಹೆಸರು ಎಲ್ಲೂ ಇಲ್ಲ!

ಇಂತಹ ನೂರಾರು ಕ್ರಾಂತಿಕಾರಿಗಳನ್ನು ವ್ಯವಸ್ಥಿತವಾಗಿ ಅವರ ಧರ್ಮದ ಕಾರಣಕ್ಕೆ ಮರೆಗೆ ಸರಿಸಲಾಗಿದೆ, ಅಥವಾ ಅಳಿಸಿ ಹಾಕಲಾಗಿದೆ. ರಾಮಪ್ರಸಾದ್ ಬಿಸ್ಮಿಲ್ ಸಂಗಾತಿಯಾಗಿದ್ದ ಕಾರಣ ಅಷ್ಫಾಕುಲ್ಲಾರಂಥವರನ್ನು ಏನೂ ಮಾಡಲಾಗದೆ ಉಳಿಸಿಕೊಳ್ಳಲಾಗಿದೆ ಅನ್ನಿಸುತ್ತೆ!!

share
ಸುರೇಶ್ ಕಂಜರ್ಪಣೆ
ಸುರೇಶ್ ಕಂಜರ್ಪಣೆ
Next Story
X