ಹಿಂದು ಧರ್ಮವನ್ನು ನಿರ್ಮೂಲನೆಗೈಯ್ಯಲು, ಮುಸ್ಲಿಮರಿಗೆ ಮೀಸಲಾತಿ ಒದಗಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ: ಪ್ರಧಾನಿ ಮೋದಿ

Update: 2024-05-10 09:31 GMT

ನರೇಂದ್ರ ಮೋದಿ | PC : PTI 

ಹೊಸದಿಲ್ಲಿ: ಮಹಾರಾಷ್ಟ್ರದ ನಂದುರ್ಬಲ್‌ ಎಂಬಲ್ಲಿ ಇಂದು ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತೆ ಕಾಂಗ್ರೆಸ್‌ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. ಉದ್ಯೋಗ ಮೀಸಲಾತಿ ಮತ್ತು ಸಂವಿಧಾನದ ಕುರಿತಂತೆ ಕಾಂಗ್ರೆಸ್‌ ಸುಳ್ಳುಗಳನ್ನು ಹರಡುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ.

ಹಿಂದು ಧರ್ಮವನ್ನು ನಿರ್ಮೂಲನೆಗೈಯ್ಯುವ ಸಂಚಿನಲ್ಲಿ ಕಾಂಗ್ರೆಸ್‌ ತೊಡಗಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಧರ್ಮ ಆಧಾರಿತ ಮೀಸಲಾತಿ ಕುರಿತು ಮಾತನಾಡಿದ ಅವರು ಇಂತಹ ಕ್ರಮಗಳು ಸಂವಿಧಾನ ಶಿಲ್ಪಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಉದ್ದೇಶಕ್ಕೆ ವಿರುದ್ಧವಾಗಿದೆ. ಧರ್ಮದ ಆಧಾರದಲ್ಲಿ ಮೀಸಲಾತಿ ಒದಗಿಸುವುದು ಸಂವಿಧಾನದಲ್ಲಿ ಅಡಕವಾಗಿರುವ ಮೌಲ್ಯಗಳು ಮತ್ತು ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ದೂರಿದರು.

“ನಿಮ್ಮ ಮೀಸಲಾತಿಯನ್ನು ಸೆಳೆದು ಅದನ್ನು ಮುಸ್ಲಿಮರಿಗೆ ಒದಗಿಸುವ ಗುಪ್ತ ಅಜೆಂಡಾ ಕಾಂಗ್ರೆಸ್‌ ಹೊಂದಿದೆ,” ಎಂದು ಹೇಳಿದ ಅವರು ಕಾಂಗ್ರೆಸ್‌ ಯಾವತ್ತೂ ಆದಿವಾಸಿಗಳ ಕಲ್ಯಾಣದ ಬಗ್ಗೆ ಯೋಚಿಸಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News