ಹೊಸವರ್ಷದ ಕಾಣಿಕೆ ; ತಿಮ್ಮಪ್ಪನ ಹುಂಡಿಯಲ್ಲಿ ತುಂಬಿತು 3 ಕೋಟಿ. ರೂ.

Update: 2016-01-01 17:33 GMT


ತಿರುಪತಿ, ಜ.1: ಹೊಸವರ್ಷದ ಮೊದಲ ದಿನ ತಿರುಪತಿಯ  ಶ್ರೀ  ಬಾಲಾಜಿ  ದೇವಸ್ಥಾನದ ಹುಂಡಿ ತುಂಬಿ ತುಳುಕಿದ್ದು,  ಭಕ್ತರಿಂದ ಕಾಣಿಕೆಯಾಗಿ ಒಂದೇ ದಿನ 3 ಕೋಟಿ ರೂ. ಜಮೆಯಾಗಿದೆ.
.ದೇಶದ ವಿವಿಧ ರಾಜ್ಯಗಳಿಂದ ಸುಮಾರು 80 ಸಾವಿರ ಭಕ್ತರು ಹೊಸವರ್ಷದ ಅಂಗವಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಚಿನ್ನ ಸೇರಿದಂತೆ ಅಮೂಲ್ಯ ವಸ್ತುಗಳ   ಕಾಣಿಕೆಯನ್ನು ಹೊರತುಪಡಿಸಿ ಕೇವಲ 3ಕೋಟಿ ರೂ ಆದಾಯ ಬಂದಿದೆ ಎಂದು ಟಿಟಿಡಿಯ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿ ಪಿ. ನಿಲೀಮಾ  ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News