ಸಾಯಲು ಮೊಬೈಲ್ ಟವರ್ ಹತ್ತಿದವನನ್ನು ಕೆಳಗಿಳಿಸಿ ಸರಿಯಾಗಿ ಬಾರಿಸಿದ ಜನ !

Update: 2016-02-04 12:48 GMT

ಚೆನ್ನೈ: ಮೊಬೈಲ್ ಟವರ್ ಹತ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದ ಯುವಕನನ್ನು ಜನರೇ ಹೊಡೆದು ಕೆಳಗಿಳಿಸಿದ್ದಾರೆ. ಕೆಲಸ ಕಳಕೊಂಡ ದುಃಖದಲ್ಲಿ ಈ ಭೂಪ ಟವರ್ ಹತ್ತಿ ಸಾಯಲು ಹೊರಟಿದ್ದ. ಧುರ ಎಂಬಲ್ಲಿನ ಜಯಪಾಲ್ ಈ ಹುಚ್ಚು ಸಾಹಸಕ್ಕಿಳಿದವನು. ಊರವರೆ ಅವನನ್ನು ಟವರ್‌ನಿಂದ ಕೆಳಗಿಳಿಸಿದ್ದಾರೆ ಮತ್ತು ಸರಿಯಾಗಿ ಬಾರಿಸಿದ್ದಾರೆ. ಸೈದಾಪೇಟೆಯಲ್ಲಿ ಈ ಘಟನೆ ನಡೆದಿತ್ತು.

ಪೊಲೀಸರು ಹಾಗೂ ಅಗ್ನಿಶಾಮಕ ದಳ ಬಂದು ಅವನಲ್ಲಿ ಟವರ್‌ನಿಂದ ಕೆಳಗಿಳಿಯಲು ವಿನಂತಿಸಿದರೂ ಕೇಳಿರಲಿಲ್ಲ. ಕೂಡಲೇ ನೆರೆಕರೆಯ ಹತ್ತು ಮಂದಿ ಯುವಕರು ಟವರ್‌ಗೆ ಹತ್ತತೊಡಗಿದರು. ಕೆಳಗೆ ಇಳಿಸಲು ನೋಡಿದಾಗ ಆತ ಪ್ರತಿಭಟಿಸತೊಡಗಿದ. ಇವರು ಅವನಿಗೆ ಹೊಡೆಯಲು ಆರಂಭಿಸಿದರು. ಆನಂತರ ಅಗ್ನಿಶಾಮಕ ದಳ ಜೊತೆಗೂಡಿ ಬಲವಂತವಾಗಿ ಅವನನ್ನು ಕೆಳಗಿಳಿಸಲಾಯಿತು. ಚೆನ್ನೈನ ಸಾಫ್ಟ್‌ವೇರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜಯಪಾಲ್‌ನನ್ನು ಕೆಲಸದಿಂದ ಸಂಸ್ಥೆ ವಜಾ ಮಾಡಿತ್ತು. ಯಾವುದೇ ಕಾರಣ ವಿಲ್ಲದೆ ತನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ನೊಂದು ಜೀವಿಸುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News