ಒಬ್ಬನೇ ಲಾಟಿಯಿಂದ ಬಿಜೆಪಿಗರನ್ನು ಅಲ್ಲಾಡಿಸಿದ್ದೀರಿ: ಶತುಘ್ನ ಬಗ್ಗೆ ಲಾಲು ಮೆಚ್ಚುಗೆ !

Update: 2016-02-10 06:23 GMT

 ಪಾಟ್ನ: ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಮಂಗಳವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯದವ್‌ರನ್ನು ಬೇರೆ ಬೇರೆ ಸಂದರ್ಭದಲ್ಲಿ ಭೇಟಿಯಾಗಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯ ವೇಳೆ ಬಿಜೆಪಿ ಶತ್ರುಘ್ನ ಸಿನ್ಹಾರನ್ನು ಮೂಲೆ ಪಾಲು ಮಾಡಿತ್ತು. ಪಾಟ್ನಾದ ವಿಮಾನ ನಿಲ್ದಾಣದಲ್ಲಿ ಆರ್‌ಜೆಡಿಯ ಲಾಲು ಪ್ರಸಾದ್ ಯಾದವ್‌ರನ್ನು ಶತ್ರುಘ್ನ ಸಿನ್ಹಾ ಭೇಟಿಯಾಗಿದ್ದಾರೆ. ಲಾಲೂರೊಂದಿಗೆ ಅವರ ಪತ್ನಿ ರಾಬ್ರಿ ದೇವಿಯೂ ಇದ್ದರು. ಶತ್ರುರ ಜೊತೆ ಅವರ ದೊಡ್ಡಣ್ಣ ಲಖನ್ ಸಿನ್ಹಾ ಕೂಡ ಇದ್ದರು.

      ಲಾಲೂ ಶತ್ರುಘ್ನ ಸಿನ್ಹಾರನ್ನು ಕಂಡೊಡನೆ "ಒಬ್ಬನೆ ಲಾಟಿಯಿಂದ ಬಿಜೆಪಿಗರನ್ನು ಅಲ್ಲಾಡಿಸಿದ್ದೀರಿ" ಎಂದು ಪ್ರತಿಕ್ರಿಯಿಸಿದ್ದರೆಂದು ವರದಿಯಾಗಿದೆ. ಶತ್ರುಘ್ನ ಸಿನ್ಹಾ ನಿತೀಶ್ ಕುಮಾರ್‌ರೊಂದಿಗೂ ಕಳೆದ ರಾತ್ರಿ ಪಾಟ್ನಾದಲ್ಲಿ ಮದುವೆ ಸಮಾರಂಭದಲ್ಲಿ ಭೇಟಿಯಾಗಿದ್ದರು. ಬಿಹಾರದ ರಾಜಕೀಯದಲ್ಲಿ ಶತ್ರುಘ್ನ ನಿರ್ಣಾಯಕ ಪಾತ್ರ ನಿಭಾಯಿಸಲು ಹೊರಟಂತಿದೆ. ರಾಜಕೀಯ ವಿರೋಧಿಗಳನ್ನು ಭೇಟಿಯಾದ ಬಗ್ಗೆ ಶತ್ರುಘ್ನರನ್ನು ಪ್ರಶ್ನಿಸಿದ್ದಾಗ ಒಂದು ಸಲ ಗೆಳೆತನವಾದರೆ ಅದು ಎಂದೂ ಇರುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ನಾವು ಬಹಳ ಹಿಂದಿನಿಂದಲೂ ಗೆಳೆಯರು, ನಮ್ಮ ಗೆಳೆತನಕ್ಕೆ ರಾಜಕೀಯ ಬಣ್ಣ ಬಳಿಯಬೇಕಿಲ್ಲ ಎಂದು ಅವರು ಹೇಳಿದ್ದಾರೆ. ಸಿನ್ಹಾ ಅಡ್ವಾಣಿಯ ಗುಂಪಿನಲ್ಲಿ ಗುರುತಿಸಿರುವ ವ್ಯಕ್ತಿಯಾಗಿದ್ದಾರೆ. ಅವರ ಈ ಭೇಟಿ ಬಿಹಾರ ಬಿಜೆಪಿಗೆ ತುಂಬ ಕಿರಿಕಿರಿಯನ್ನುಂಟು ಮಾಡುವಂತಹದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News