ಮದುವೆ ನಿಶ್ಚಯ ಮುರಿದು ಬಿದ್ದ ದುಃಖದಲ್ಲಿ ಯುವತಿ ಪ್ರಾಣವನ್ನೇ ಬಿಟ್ಟಳು!
ವಾರಣಾಸಿ, ಎಪ್ರಿಲ್ 26: ಮದುವೆಯ ಒಂದು ಸಂಬಂಧ ಕುದುರಿಕೊಳ್ಳದಿದ್ದರೆ ಇನ್ನೊಂದು ಸಂಬಂಧ ಹುಡುಕುವುದು ಸಾಮಾನ್ಯ. ಆದರೆ ಕೆಲವು ಭಾವ ಜೀವಿಗಳು ಒಂದು ಪ್ರಸ್ತಾಪ ಮುರಿದುಬಿದ್ದರೆ ಆಕಾಶವೇ ಕೆಳಗೆ ಬಿದ್ದಂತೆ ಆಡುತ್ತಾರೆ ಇಂತಹದೊಂದು ಘಟನೆ ಉತ್ತರ ಪ್ರದೇಶದದಿಂದ ವರದಿಯಾಗಿದೆ. ವಾರಣಾಸಿ ಬೆಲೋಪುರ ಎಂಬಲ್ಲಿ ನಿನ್ನೆ ಕಾಶಿ ಹಿಂದೂ ವಿಶ್ವವಿದ್ಯಾನಿಲಯದ ಓರ್ವ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಸ್ವಾತಿ ಪಾಂಡ್ಯ ನೇಣು ಹಾಕಿಕೊಂಡು ಮೃತರಾದದ್ದು ತನಗೆ ನಿಶ್ಚಿಯಿಸಲಾದ ಮದುವೆ ಮುರಿದು ಬಿದ್ದ ನಿರಾಶೆ ಕಾರಣದಿಂದಾಗಿದೆ.
ಪೊಲೀಸರು ತಿಳಿಸಿರುವ ಪ್ರಕಾರ ವಾರಣಾಸಿ ನಗರದ ನಿವಾಸಿ ಡಾ. ಸ್ವಾತಿ ಪಾಂಡ್ಯ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಮೃತರಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾದ ಮಾಹಿತಿಯಂತೆ ಸ್ವಾತಿ ಪಾಂಡ್ಯರ ಮದುವೆ ಓರ್ವ ಇಂಜಿನಿಯರ್ನೊಂದಿಗೆ ನಿರ್ಧಾರವಾಗಿತ್ತು. ಮೇ 9ಕ್ಕೆ ಇಬ್ಬರ ನಿಶ್ಚಿತಾರ್ಥ ನಡೆಯು ದಿತ್ತು. ಆದರೆ ಯಾವುದೋ ಕಾರಣದಿಂದ ಮದುವೆ ನಿಂತು ಹೋಗಿದೆ.ಇದರಿಂದ ಸ್ವಾತಿ ತುಂಬಾ ದುಃಖಿತರಾಗಿದ್ದರು. ಈ ದುಃಖದಲ್ಲಿಯೇ ಅವರು ನೇಣು ಹಾಕಿಕೊಂಡಿದ್ದರು. ಮನೆಯವರು ನೀಡಿದ ದೂರಿನ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.