ಕುಡಿದ ಅಮಲಿನಲ್ಲಿ ಶಾಲಾ ಬಸ್ ಚಾಲನೆ: ಚಾಲಕನಿಗೆ ದಂಡ

Update: 2016-08-30 06:33 GMT

ಬೆಂಗಳೂರು, ಆ.30: ಕುಡಿದ ಅಮಲಿನಲ್ಲಿ ಶಾಲಾ ಬಸ್ಸನ್ನು ಯದ್ವಾತದ್ವಾ ಚಲಾಯಿಸುತ್ತಿದ್ದ ಚಾಲಕನನ್ನು ಬಂಧಿಸಿರುವ ಬ್ಯಾಟರಾಯನಪುರ ಠಾಣೆಯ ಪೊಲೀಸರು ಚಾಲಕನಿಗೆ ದಂಡ ವಿಧಿಸಿದ್ದಾರೆ.

ಪಾನಮತ್ತ ಚಾಲಕನನ್ನು ಮಲ್ಲತ್ತಹಳ್ಳಿಯ ನಿವಾಸಿ ಬೆಟ್ಟೇಗೌಡ ಎಂದು ಗುರುತಿಸಲಾಗಿದೆ. ನಗರದ ನಾಗರಬಾವಿ ಸರ್ಕಲ್ ಬಳಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮಕ್ಕಳನ್ನು ಕೂರಿಸಿಕೊಂಡು ಯದ್ವಾತದ್ವಾ ಬಸ್ ಚಲಾಯಿಸುತ್ತಿದ್ದ ಚಾಲಕನ ಮೇಲೆ ಸಂಶಯಗೊಂಡ ಪೊಲೀಸರು ಆತನನ್ನು ತಪಾಸಣೆ ನಡೆಸಿದಾಗ ಮದ್ಯಸೇವಿಸಿರುವುದು ಕಂಡುಬಂದಿತು.

ಕೂಡಲೇ ಶಾಲಾ ಬಸ್‌ನ್ನು ಜಪ್ತಿ ಮಾಡಿದ ಪೊಲೀಸರು ಚಾಲಕನಿಗೆ ದಂಡ ವಿಧಿಸಿದರು. ಶಾಲಾ ಮಕ್ಕಳನ್ನು ಬೇರೊಂದು ಬಸ್‌ನ ಮೂಲಕ ಶಾಲೆಗೆ ಕಳುಹಿಸಿಕೊಟ್ಟರು. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News