ಜನಾರ್ದನ ರೆಡ್ಡಿ ಪುತ್ರಿಯ ನಿಶ್ಚಿತಾರ್ಥ

Update: 2016-09-09 06:30 GMT

ಬೆಂಗಳೂರು, ಆ.30: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿಯ ಏಕೈಕ ಪುತ್ರಿಯ ವಿವಾಹ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದ್ದು, ವರದ ಹೈದರಾಬಾದ್ ಮೂಲದ ಉದ್ಯಮಿಯಾಗಿದ್ದಾರೆ.
ರೆಡ್ಡಿಯ ಏಕೈಕ ಪುತ್ರಿ ಬ್ರಹ್ಮಣಿಯ ವಿವಾಹ ನಿಶ್ಚಿತಾರ್ಥವು ಎರಡು ದಿನಗಳ ಹಿಂದೆ ಹೈದರಾಬಾದ್ ಮೂಲದ ಉದ್ಯಮಿಯೊಂದಿಗೆ ಅದ್ದೂರಿಯಾಗಿ ಜರಗಿದೆ. ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಆಪ್ತರ ಸಮುಖ್ಮದಲ್ಲಿ ಈ ಕಾರ್ಯಕ್ರಮ ನಡೆದಿದೆ.
ವರ ಹೈದರಾಬಾದ್ ಮೂಲದ ಮೂಲದ ಉದ್ಯಮಿಯಾಗಿದ್ದು, ವಿದೇಶದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಸೇರಿದಂತೆ ಕನಸ್ಟ್ರಕ್ಷನ್ ಕಂಪನಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಸಚಿವರ ಜನಾರ್ದನ ರೆಡ್ಡಿಯವರು ಗಣಿ ವ್ಯವಹಾರಕ್ಕೆ ಸಂಬಂಧಿಸಿ ಜೈಲುಪಾಲಾಗುವ ಮೂಲಕ ಉದ್ಯಮ ಸೇರಿದಂತೆ ರಾಜಕೀಯ ವರ್ಚಸ್ಸನ್ನು ಕಳೆದುಕೊಂಡಿದ್ದರು. ಆದರೂ ಇದೀಗ ಏಕೈಕ ಮಗಳಿಗೆ ಭಾರೀ ಉದ್ಯಮಿಯೊಂದಿಗೆ ವಿವಾಹ ಸಂಬಂಧ ಬೆಳೆಸುವ ಮೂಲಕ ಸುದ್ದಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News