ದಲಿತರ ದಮನಕ್ಕೆ ಜಾತಿಪದ್ಧತಿಯ ಅಸ್ತ್ರ

Update: 2016-10-19 05:02 GMT

‘‘ಬ್ರಾಹ್ಮಣರು ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇ.3.5ಕ್ಕಿಂತ ಹೆಚ್ಚಿಲ್ಲ. ಇಂದು ಅವರು ಶೇ.70ರಷ್ಟು ಸರಕಾರಿ ಹುದ್ದೆಗಳನ್ನು ಹೊಂದಿದ್ದಾರೆ. ಈ ಅಂಕಿಸಂಖ್ಯೆಯು ಕೇವಲ ಗೆಜೆಟೆಡ್ ಹುದ್ದೆಗಳನ್ನು ಮಾತ್ರವೇ ಪ್ರಸ್ತಾವಿಸುತ್ತಿದೆಯೆಂದು ನಾನು ಊಹಿಸುತ್ತೇನೆ. ನಾಗರಿಕ ಸೇವೆಯ ಉನ್ನತ ಸ್ತರದಲ್ಲಿ, ಉಪಕಾರ್ಯದರ್ಶಿ ಹುದ್ದೆಯಿಂದ ಮೇಲ್ಮುಖವಾಗಿ ಪ್ರತಿ 500 ಮಂದಿಯಲ್ಲಿ 310 ಮಂದಿ ಬ್ರಾಹ್ಮಣರು ಅಂದರೆ ಶೇ.63ರಷ್ಟಿದ್ದಾರೆ. 26 ಮಂದಿ ಮುಖ್ಯ ರಾಜ್ಯ ಕಾರ್ಯದರ್ಶಿಗಳಲ್ಲಿ 19 ಮಂದಿ ಬ್ರಾಹ್ಮಣರು, 27 ರಾಜ್ಯಪಾಲರು ಹಾಗೂ ಲೆ.ಗವರ್ನರ್‌ಗಳಲ್ಲಿ 13 ಮಂದಿ ಬ್ರಾಹ್ಮಣರಾಗಿದ್ದಾರೆ. 16 ಮಂದಿ ಸುಪ್ರೀಂಕೋರ್ಟ್ ನ್ಯಾಯಾಧೀಶರಲ್ಲಿ 9 ಮಂದಿ ಬ್ರಾಹ್ಮಣರು. ಹೈಕೋರ್ಟ್ ಗಳ 330 ಮಂದಿ ನ್ಯಾಯಾಧೀಶರಲ್ಲಿ 166 ಮಂದಿ ಬ್ರಾಹ್ಮಣರು, 140 ರಾಯಭಾರಿಗಳಲ್ಲಿ 58 ಮಂದಿ ಬ್ರಾಹ್ಮಣರು. ಒಟ್ಟು 3300 ಭಾರತೀಯ ಆಡಳಿತಾತ್ಮಕ ಸೇವೆಯ ಅಧಿಕಾರಿಗಳಲ್ಲಿ 2376 ಮಂದಿ ಬ್ರಾಹ್ಮಣರು.


 ನನ್ನ ತಂದೆ ಹಿಂದೂ,ಬ್ರಹ್ಮಸಮಾಜಿ. ವಯಸ್ಕಳಾಗುವವರೆಗೂ ನಾನವರನ್ನು ಭೇಟಿಯಾಗಿರಲೇ ಇಲ್ಲ. ನಾನು ನೈಋತ್ಯ ಭಾರತದ ರಾಜ್ಯವಾದ ಕಮ್ಯುನಿಸ್ಟ್ ಆಳ್ವಿಕೆಯ ಕೇರಳದ ಅಯ್‌ಮನಂನಲ್ಲಿರುವ ಸಿರಿಯನ್ ಕ್ರೈಸ್ತ ಕುಟುಂಬವೊಂದರಲ್ಲಿ ತಾಯಿ ಜೊತೆ ಬೆಳೆದೆ. ನನ್ನ ಸುತ್ತಮುತ್ತಲೂ ಜಾತೀಯತೆಯ ಕೆಡುಕುಗಳು ಎದ್ದುಕಾಣುತ್ತಿದ್ದವು. ಅಯ್‌ಮನಂ ತನ್ನದೇ ಆದ ಪ್ರತ್ಯೇಕ ‘ಪರಯ್ಯನ್’ ಚರ್ಚ್ ಹೊಂದಿದ್ದು, ಅಲ್ಲಿ ಅಸ್ಪಶ್ಯ ಪಂಗಡಗಳಿಗೆ ಪರಯ್ಯನ್ ಪಾದ್ರಿಗಳು ಧಾರ್ಮಿಕ ಬೋಧನೆಗಳನ್ನು ಮಾಡುತ್ತಿದ್ದರು.
  ಜಾತಿಯು ಜನರ ಹೆಸರಿನೊಂದಿಗೆ ಥಳಕುಹಾಕಿಕೊಂಡಿತ್ತು. ಜನರು ಪರಸ್ಪರರನ್ನು ಸಂಬೋಧಿಸುವ ರೀತಿಯಲ್ಲಿ, ಅವರು ಮಾಡುವ ಕೆಲಸದಲ್ಲಿ, ಅವರು ಧರಿಸುವ ಬಟ್ಟೆಯಲ್ಲಿ, ಮದುವೆ ಸಂಬಂಧವನ್ನು ಹೊಂದಿಸಿಕೊಳ್ಳುವುದರಲ್ಲಿ, ಅವರು ಆಡುವ ಭಾಷೆ ಹೀಗೆ ಎಲ್ಲದರಲ್ಲೂ ಜಾತಿಯ ಪ್ರಭಾವ ಕಾಣಸಿಗುತ್ತಿತ್ತು. ಆದರೂ ಕೂಡಾ, ಯಾವುದೇ ಪಠ್ಯಪುಸ್ತಕದಲ್ಲಿಯೂ ನನಗೆ ಜಾತೀಯತೆಯ ಭಾವನೆ ಎದುರಾಗಿರಲಿಲ್ಲ.
ಭಾರತೀಯ ಬರಹಗಾರ ಹಾಗೂ ಚಿಂತಕ ಬಿ.ಆರ್.ಅಂಬೇಡ್ಕರ್ 1936ರಲ್ಲಿ ನೀಡಿದ ಉಪನ್ಯಾಸ ‘ಜಾತಿ ನಿರ್ಮೂಲನೆ’ (ಅನಿಹಿಲೇಶನ್ ಆಫ್ ಕಾಸ್ಟ್) ಓದುತ್ತಿದ್ದಾಗ ನಮ್ಮ ಶೈಕ್ಷಣಿಕ ಜಗತ್ತಿನಲ್ಲಿ ತೆರೆದಿಟ್ಟ ರಂಧ್ರವೊಂದು ಇರುವ ಬಗ್ಗೆ ನನ್ನಲ್ಲಿ ಅರಿವು ಮೂಡಿತು. ಅವರ ಉಪನ್ಯಾಸ ಓದಿದಾಗ ನನಗೆ ಯಾಕೆ ಆ ರಂಧ್ರ ಇನ್ನೂ ಉಳಿದುಕೊಂಡಿದೆ ಹಾಗೂ ನಮ್ಮ ಭಾರತೀಯ ಸಮಾಜವು ವೈಚಾರಿಕ ಹಾಗೂ ಕ್ರಾಂತಿಕಾರಿ ಬದಲಾವಣೆಗೊಳಗಾಗುವವರೆಗೂ ಯಾಕೆ ಅದು ಮುಂದುವರಿಯಲಿದೆಯೆಂಬುದನ್ನು ನನಗೆ ಸ್ಪಷ್ಟಪಡಿಸಿತು.
 
    2014ರ ನೊಬೆಲ್ ಶಾಂತಿ ಪ್ರಶಸ್ತಿಯ ಜಂಟಿ ಪುರಸ್ಕೃತೆ ಮಲಾಲಾ ಯೂಸುಫ್‌ಝಾಯಿ ಹೆಸರನ್ನು ನೀವು ಕೇಳಿರಬಹುದು. ಆದರೆ ಸುರೇಖ್ ಭೊತ್‌ಮಾಂಗೆ ಅವರ ಹೆಸರನ್ನು ಕೇಳಿರಲಾರಿರಿ. ಮಲಾಲಾಗೆ ಕೇವಲ 15 ವರ್ಷ ವಯಸ್ಸು. ಆದರೆ ಆಕೆ ಈಗಾಗಲೇ ಹಲವಾರು ‘ಅಪರಾಧ’ಗಳನ್ನು ಎಸಗಿದ್ದಾಳೆ. ಅವಳು ಹುಡುಗಿ. ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ವಾಸವಾಗಿದ್ದಳು. ಆಕೆ ಬಿಬಿಸಿಯ ಬ್ಲಾಗ್ ಬರಹಗಾರ್ತಿಯೂ ಆಗಿದ್ದಳು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕೂಡಾ ಆಕೆಯ ಬಗ್ಗೆ ವೀಡಿಯೊ ಒಂದನ್ನು ಪ್ರಸಾರ ಮಾಡಿತ್ತು. ಮಲಾಲಾ ವೈದ್ಯೆಯಾಗಲು ಬಯಸಿದ್ದಳು. ಆದರೆ ಅವಳ ತಂದೆಗೆ ಆಕೆ ರಾಜಕಾರಣಿಯಾಗಬೇಕೆಂಬ ಹಂಬಲವಿತ್ತು. ಆಕೆ ದಿಟ್ಟ ಬಾಲಕಿಯಾಗಿದ್ದಳು. ಶಾಲೆಗಳು ಹುಡುಗಿಯರಿಗಲ್ಲವೆಂದು ತಾಲಿಬಾನ್ ಘೋಷಿಸಿದಾಗ ಹಾಗೂ ತನ್ನ ವಿರುದ್ಧ ಮಾತನಾಡುವುದನ್ನು ನಿಲ್ಲಿಸದೆ ಇದ್ದಲ್ಲಿ ಕೊಲ್ಲುವುದಾಗಿ ತನಗೆ ಹಾಕಿದ ಬೆದರಿಕೆಗೆ ಮಲಾಲಾ (ಹಾಗೂ ಆಕೆಯ ತಂದೆ ) ಸೊಪ್ಪುಹಾಕಲಿಲ್ಲ. 2012ರ ಅಕ್ಟೋಬರ್ 9ರಂದು ಬಂದೂಕುಧಾರಿಯೊಬ್ಬ ಶಾಲಾಬಸ್‌ನಲ್ಲೇ ಆಕೆಯ ತಲೆಗೆ ಗುಂಡಿಟ್ಟ. ಗಂಭೀರಗಾಯಗೊಂಡು ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಮಲಾಲಾಳನ್ನು ಇಂಗ್ಲೆಂಡ್‌ಗೆ ಕೊಂಡೊಯ್ಯಲಾಯಿತು. ಅಲ್ಲಿ ಸಾಧ್ಯವಿರುವ ಎಲ್ಲಾ ವೈದ್ಯಕೀಯ ಚಿಕಿತ್ಸೆ ದೊರೆತ ಬಳಿಕ ಆಕೆ ಬದುಕುಳಿದಳು. ಅದೊಂದು ಪವಾಡವಾಗಿತ್ತು.
ಅಮೆರಿಕದ ಅಧ್ಯಕ್ಷರು ಹಾಗೂ ವಿದೇಶಾಂಗ ಕಾರ್ಯದರ್ಶಿ ಮಲಾಲಾಗೆ ಬೆಂಬಲ ಹಾಗೂ ಏಕತೆಯ ಸಂದೇಶಗಳನ್ನು ಕಳುಹಿಸಿದರು. ಪಾಪ್ ಗಾಯಕಿ ಮಡೋನಾ ಆಕೆಗಾಗಿ ಹಾಡೊಂದನ್ನು ಸಮರ್ಪಿಸಿದರು. ಅವಳ ಬಗ್ಗೆ ಹಾಲಿವುಡ್ ನಟಿ ಆ್ಯಂಜೆಲಿನಾ ಜೋಲಿ ಲೇಖನವೊಂದನ್ನು ಬರೆದರು. ಟೈಮ್ಸ್ ಪತ್ರಿಕೆಯ ಮುಖಪುಟದಲ್ಲಿ ಮಲಾಲಾ ರಾರಾಜಿಸಿದಳು.

  ಮಲಾಲಾಳ ಹತ್ಯೆ ಯತ್ನ ನಡೆದ ಕೆಲವೇ ದಿನಗಳೊಳಗೆ, ಜಾಗತಿಕ ಶಿಕ್ಷಣ ಕುರಿತಂತೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಗೊರ್ಡೊನ್ ಬ್ರೌನ್, ಆರಂಭಿಸಿದ ‘ನಾನು ಮಲಾಲಾ’ ಅಭಿಯಾನವು ಪ್ರತಿಯೊಂದು ಹೆಣ್ಣು ಮಗುವಿಗೂ ಶಿಕ್ಷಣವನ್ನು ಓದಗಿಸಬೇಕೆಂದು ಪಾಕ್ ಸರಕಾರಕ್ಕೆ ಕರೆ ನೀಡಿತು. ಅಮೆರಿಕದ ಡ್ರೋನ್ ವಿಮಾನಗಳು ಸ್ತ್ರೀದ್ವೇಷಿ, ಭಯೋತ್ಪಾದಕರನ್ನು ಮಟ್ಟಹಾಕಲು ಪಾಕಿಸ್ತಾನದಲ್ಲಿ ತನ್ನ ಡ್ರೋನ್ ದಾಳಿಯನ್ನು ಮುಂದುವರಿಸಿದವು.
  ಸುರೇಖಾ ಭೂತ್‌ಮಾಂಗೆಗೆ 40 ವರ್ಷ ವಯಸ್ಸಾಗಿತ್ತು. ಆಕೆ ಕೂಡಾ ಹಲವಾರು ‘ಅಪರಾಧ’ಗಳನ್ನು ಎಸಗಿದ್ದಾಳೆ. ಆಕೆಯೋರ್ವ ಮಹಿಳೆ. ಅದರಲ್ಲೂ ಭಾರತದಲ್ಲಿ ಬದುಕು ಸಾಗಿಸುತ್ತಿದ್ದ ಅಸ್ಪಶ್ಯ ಸಮುದಾಯಕ್ಕೆ ಸೇರಿದ ಮಹಿಳೆಯಾಗಿದ್ದಳು ಆದರೆ ಆಕೆ ಕಡುಬಡವಳಾಗಿರಲಿಲ್ಲ. ಆಕೆ ಪತಿಗಿಂತಲೂ ಹೆಚ್ಚು ಸುಶಿಕ್ಷಿತಳಾಗಿದ್ದಳು. ಹೀಗಾಗಿ ಅವಳು ತನ್ನ ಕುಟುಂಬದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಅಂಬೇಡ್ಕರ್ ಆಕೆಯ ನೆಚ್ಚಿನ ಹೀರೋ ಆಗಿದ್ದರು. ಅಂಬೇಡ್ಕರ್ ಅವರಂತೆ ಸುರೇಖಾಳ ಕುಟುಂಬವೂ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿತು. ಅವಳ ಮಕ್ಕಳು ವಿದ್ಯಾವಂತರಾಗಿದ್ದರು. ಆಕೆಯ ಇಬ್ಬರು ಪುತ್ರರಾದ ಸುಧೀರ್ ಹಾಗೂ ರೋಶನ್ ಕಾಲೇಜ್‌ನಲ್ಲಿ ಕಲಿಯುತ್ತಿದ್ದಾರೆ. ಪುತ್ರಿ ಪ್ರಿಯಾಂಕಾಗೆ 17 ವರ್ಷ ವಯಸ್ಸಾಗಿದ್ದು, ಹೈಸ್ಕೂಲ್ ಶಿಕ್ಷಣ ಮುಗಿಸಿದ್ದಾಳೆ. ಸುರೇಖಾ ಹಾಗೂ ಆಕೆಯ ಪತಿ ಮಹಾರಾಷ್ಟ್ರದ ಖೈರ್ಲಾಂಜಿ ಗ್ರಾಮದಲ್ಲಿ ಪುಟ್ಟ ಜಮೀನೊಂದನ್ನು ಖರೀದಿಸಿದ್ದರು.

     ಆ ಜಮೀನು, ಸುರೇಖಾಳ ಸಮುದಾಯವಾದ ಮಹರ್ ಜಾತಿಗಿಂತ ಶ್ರೇಷ್ಠರೆಂದು ತಮ್ಮನ್ನು ಕರೆದುಕೊಳ್ಳುವ ಜಾತಿಗಳಿಗೆ ಸೇರಿದವರ ಹೊಲಗಳಿಂದ ಸುತ್ತುವರಿದಿತ್ತು. ಆಕೆ ದಲಿತಳಾಗಿದ್ದರಿಂದ ಒಂದು ಉತ್ತಮ ಜೀವನಕ್ಕಾಗಿ ಹಂಬಲಿಸಲು ಆಕೆಗೆ ‘ಹಕ್ಕಿರಲಿಲ’್ಲ. ತನ್ನ ಹುಲ್ಲು ಚಾವಣಿಯ ಮಣ್ಣಿನ ಮನೆಯನ್ನು ಇಟ್ಟಿಗೆ ಮನೆಯಾಗಿ ಪರಿವರ್ತಿಸಲು ಅಥವಾ ವಿದ್ಯುತ್ ಸಂಪರ್ಕವನ್ನು ಪಡೆಯಲು ಸುರೇಖಾಗೆ ಗ್ರಾಮಪಂಚಾಯತ್ ಅನುಮತಿ ನೀಡಲಿಲ್ಲ. ಆಕೆಯ ಕುಟುಂಬದ ಕೃಷಿ ಜಮೀನಿನ ನೀರಾವರಿಗಾಗಿ, ಕಾಲುವೆಯಿಂದ ನೀರು ಹರಿಸಲು ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಆಕೆಯ ಜಮೀನಿನ ನಡುವೆಯೇ ಸಾರ್ವಜನಿಕ ರಸ್ತೆಯೊಂದನ್ನು ನಿರ್ಮಿಸಲು ಅವರು ಯತ್ನಿಸಿದರು. ಆಗ ಆಕೆ ಪ್ರತಿಭಟಿಸಿದಾಗ, ಅವಳ ಹೊಲಗಳ ಮೇಲೆಯೇ ತಮ್ಮ ಎತ್ತಿನ ಗಾಡಿಗಳನ್ನು ಓಡಿಸಿದರು. ದನಗಳನ್ನು ಬಿಟ್ಟು, ಎದ್ದು ನಿಂತಿದ್ದ ಆಕೆಯ ಹೊಲದ ಪೈರನ್ನು ಅವು ಮೇಯುವಂತೆ ಮಾಡಿದ್ದರು.
      ಆದರೂ ಸುರೇಖಾ ಹಿಂಜರಿಯಲಿಲ್ಲ. ಪೊಲೀಸರಿಗೆ ದೂರು ನೀಡಿದಳು. ಆದರೆ ಅವರು ಆಕೆಯ ದೂರಿಗೆ ಕಿವಿಗೊಡಲಿಲ್ಲ. ಹಲವು ತಿಂಗಳುಗಳವರೆಗೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿತ್ತು. ಸುರೇಖಾಳಿಗೆ ಎಚ್ಚರಿಕೆಯಾಗಿ ಗ್ರಾಮಸ್ಥರು ಆಕೆಯ ಸಂಬಂಧಿಯೊಬ್ಬನ ಮೇಲೆ ದಾಳಿ ಮಾಡಿ, ಆತನನ್ನು ಹತ್ಯೆಗೈದಿದ್ದರು. ಆಗ ಸುರೇಖಾ ಇನ್ನೊಂದು ದೂರು ನೀಡಿದಳು. ಈ ಬಾರಿ ಪೊಲೀಸರು ಕೆಲವರನ್ನು ಬಂಧಿಸಿದರು. ಆದರೆ ಆರೋಪಿಗಳು ಹೆಚ್ಚುಕಮ್ಮಿ ತಕ್ಷಣವೇ ಜಾಮೀನು ಪಡೆದು ಹೊರಬಂದರು. ಅವರು ಬಿಡುಗಡೆಯಾದ ದಿನದಂದೇ, 2006ರ ಸೆಪ್ಟಂಬರ್ 29ರಂದು ಸಂಜೆ ಸುಮಾರು ಆರುಗಂಟೆಯ ಹೊತ್ತಿಗೆ ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಸುಮಾರು 40 ಮಂದಿ ಉದ್ರಿಕ್ತ ಗ್ರಾಮಸ್ಥರ ಗುಂಪೊಂದು ಟ್ರಾಕ್ಟರ್‌ಗಳಲ್ಲಿ ಆಗಮಿಸಿ, ಸುರೇಖಾಳ ಮನೆಯನ್ನು ಸುತ್ತುವರಿಯಿತು. ಅವಳ ಪತಿ ಭಯ್ಯಾಲಾಲ್ ಹೊಲದಲ್ಲಿದ್ದ. ಗದ್ದಲವನ್ನು ಕೇಳುತ್ತಲೇ ಓಡೋಡಿ ಮನೆಗೆ ಬಂದ. ಪೊದೆಯಲ್ಲಿ ಅವಿತುಕೊಂಡ ಆತ ತನ್ನ ಕುಟುಂಬದ ಮೇಲೆ ಗ್ರಾಮಸ್ಥರು ದಾಳಿ ಮಾಡುವುದನ್ನು ಕಂಡ. ಹತ್ತಿರದ ಪಟ್ಟಣವಾದ ಜೌಸಾಲಾಕ್ಕೆ ಧಾವಿಸಿದ ಆತನು, ತನ್ನ ಬಂಧುವೊಬ್ಬರ ಮೂಲಕ ಪೊಲೀಸರಿಗೆ ಕರೆ ಮಾಡುವಲ್ಲಿ ಸಫಲನಾದ (ಇಲ್ಲಿ ನಿಮಗೆ ಪೊಲೀಸರು ಫೋನ್ ತೆಗೆಯಲು ಕೂಡಾ ನೀವು ವಶೀಲಿ ಮಾಡಬೇಕಾಗುತ್ತದೆ). ಆದರೂ ಅವರು ಬರಲೇ ಇಲ್ಲ. ಈ ಗುಂಪು ಸುರೇಖಾ, ಪ್ರಿಯಾಂಕಾ ಹಾಗೂ ಇಬ್ಬರು ಹುಡುಗರನ್ನು (ಅವರಲ್ಲೊಬ್ಬಾತ ಭಾಗಶಃ ಅಂಧ) ಮನೆಯಿಂದ ಹೊರಗೆ ದರದರನೆ ಎಳೆದೊಯ್ಯಿತು. ತಮ್ಮ ತಾಯಿ ಹಾಗೂ ಸಹೋದರಿಯ ಮೇಲೆಯೇ ಅತ್ಯಾಚಾರವೆಸಗುವಂತೆ ಗುಂಪು ಅವರಿಗೆ ಆದೇಶ ನೀಡಿದರು. ಅದಕ್ಕೆ ಈ ಹುಡುಗರು ನಿರಾಕರಿಸಿದಾಗ ಅವರ ಜನನಾಂಗಗಳನ್ನು ಕತ್ತರಿಸಲಾಯಿತು. ತರುವಾಯ ಅವರನ್ನು ಬರ್ಬರವಾಗಿ ಕಡಿದು ಕೊಲ್ಲಲಾಯಿತು. ಸುರೇಖಾ ಹಾಗೂ ಪ್ರಿಯಾಂಕಾ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಗುಂಪು, ಇಬ್ಬರಿಗೂ ಥಳಿಸಿ ಕೊಂದುಹಾಕಿತು. ಈ ನಾಲ್ವರ ಮೃತದೇಹಗಳನ್ನು ಸಮೀಪದ ಕಾಲುವೆಯೊಂದರ ಬಳಿ ಎಸೆಯಲಾಯಿತು, ಮಾರನೆಯ ದಿನ ಅವು ಪತ್ತೆಯಾದವು.

  ಮೊದಲಿಗೆ ಪತ್ರಿಕೆಗಳು, ಇದೊಂದು ‘ಮರ್ಯಾದಾ ಹತ್ಯೆ’ಯೆಂಬುದಾಗಿ ವರದಿ ಮಾಡಿದವು. ಸುರೇಖಾಳು ಬಂಧುವೊಬ್ಬನ (ಈ ವ್ಯಕ್ತಿಯ ಮೇಲೂ ಹಲ್ಲೆ ನಡೆದಿತ್ತು) ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ಗ್ರಾಮಸ್ಥರು ಆಕೆಯ ಬಗ್ಗೆ ಕುಪಿತರಾಗಿದ್ದರು ಎಂದು ಅವು ಬಣ್ಣಿಸಿದ್ದವು. ದಲಿತ ಸಂಘಟನೆಗಳು ಸಾಮೂಹಿಕ ಪ್ರತಿಭಟನೆಗಳನ್ನು ನಡೆಸಿದ ಪರಿಣಾಮ, ಕಾನೂನು ವ್ಯವಸ್ಥೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು. ಈ ಭೀಕರ ಹತ್ಯಾಕಾಂಡದ ಕುರಿತ ಸಾಕ್ಷಾಧಾರಗಳನ್ನು ಹೇಗೆ ತಿರುಚಲಾಯಿತು ಎಂಬ ಬಗ್ಗೆ ನಾಗರಿಕ ಸತ್ಯಶೋಧನಾ ಸಮಿತಿಗಳು ವರದಿ ಮಾಡಿದವು. ಪ್ರಕರಣದ ಬಗ್ಗೆ ಕೆಳ ನ್ಯಾಯಾಲಯವು ಅಂತಿಮವಾಗಿ ತೀರ್ಪೊಂದನ್ನು ಪ್ರಕಟಿಸಿ, ಮುಖ್ಯ ಆರೋಪಿಗಳಿಗೆ ಮರಣದಂಡನೆ ಘೋಷಿಸಿತು. ಆದರೆ, ಈ ಪ್ರಕರಣವನ್ನು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಗಣಿಸಲು ಅದು ನಿರಾಕರಿಸಿತು. ಖೈರ್ಲಾಂಜಿ ಹತ್ಯಾಕಾಂಡವು ಸೇಡಿನ ಹಂಬಲದಿಂದ ನಡೆದ ಅಪರಾಧವಾಗಿದ್ದು, ಇಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ಪುರಾವೆಗಳು ದೊರೆತಿಲ್ಲ ಹಾಗೂ ಈ ಕೊಲೆಗಳ ಹಿಂದೆ ಜಾತಿ ದೃಷ್ಟಿಕೋನವಿರಲಿಲ್ಲವೆಂದು ನ್ಯಾಯಾಧೀಶರು ತಿಳಿಸಿದ್ದರು. ಇದರಿಂದಾಗಿ ಉನ್ನತ ನ್ಯಾಯಾಲಯದಲ್ಲಿ ಪ್ರಕರಣದ ಅಪರಾಧಿಗಳಲ್ಲಿ ಕೆಲವರು ದೋಷಮುಕ್ತಗೊಂಡರೆ, ಇನ್ನು ಕೆಲವರ ಶಿಕ್ಷೆಯ ಪ್ರಮಾಣ ಕಡಿಮೆಯಾಯಿತು. ಭಾರತದಲ್ಲಿ ಹೀಗಾಗುವುದು ಹೊಸತೇನೂ ಅಲ್ಲ.

ಸುರೇಖಾ ಭೂತ್‌ಮಾಂಗೆ ಹಾಗೂ ಆಕೆಯ ಮಕ್ಕಳು ‘ಮಾರುಕಟ್ಟೆ ಸ್ನೇಹಿ’ ಪ್ರಜಾಪ್ರಭುತ್ವ ದಲ್ಲಿ ಬದುಕಿದ್ದರು. ಹೀಗಾಗಿ, ವಿಶ್ವಸಂಸ್ಥೆಯಿಂದ ಭಾರತ ಸರಕಾರಕ್ಕೆ ‘ನಾನು ಸುರೇಖಾ’ ಎಂಬ ಅರ್ಜಿಗಳು ಬರಲಿಲ್ಲ ಅಥವಾ ಇತರ ದೇಶ ಗಳ ವರಿಷ್ಠರಿಂದ ಯಾವುದೇ ಆಕ್ರೋಶದ ಸಂದೇಶ ಗಳು ರವಾನೆಯಾಗಲಿಲ್ಲ. ನಾವು ಅಸ್ಪಶ್ಯತೆ ಯನ್ನು ಆಚರಿಸುತ್ತಿದ್ದೇವೆಂಬ ಕಾರಣಕ್ಕೆ ನಮ್ಮ ಮೇಲೆ ಯಾರೂ ವಿಮಾನದಿಂದ ಬಾಂಬು ಗಳನ್ನು ಎಸೆಯಲಾರರೆಂಬುದು ನಮಗೆ ತಿಳಿದಿದೆ.

 1945ರಲ್ಲಿ ಅಂಬೇಡ್ಕರ್ ತಾನು ಬರೆದ ‘ಟು ದ ಅನ್‌ಟಚೇಬಲ್ಸ್’ ಲೇಖನದಲ್ಲಿ ಹಿಂದೂ ಧರ್ಮವು ಸಾಕ್ಷಾತ್ ಭಯಾನಕಗಳ ಕೊಠಡಿಯೆಂದು ಹಾಲಿ ಚಿಂತಕರಿಗೂ ಇರ ದಂತಹ ಅಸಾಧಾರಣವಾದ ಗಟ್ಟಿಗತನದೊಂದಿಗೆ ಹೇಳಿದ್ದಾರೆ. ತನ್ನ ಸಹ ಮಾನವಜೀವಿಗಳು ಭಯಾನಕ ಕೊಠಡಿಯಲ್ಲಿ ವಾಸವಾಗಿದ್ದಾರೆ ಎಂಬುದನ್ನು ಬಣ್ಣಿಸಲು ಅವರು ಅಸ್ಪಶ್ಯರು, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳಂತಹ ಪದಗಳನ್ನು ಬಳಸಬೇಕಾಯಿತು. ಅಂಬೇಡ್ಕರ್ ಅವರ ಅಸ್ಪಶ್ಯ ಎಂಬ ಪದವನ್ನು ಆಕ್ರೋಶದ ಭಾವನೆಯೊಂದಿಗೆ ಬಳಸಿದ್ದರು. ಇಂದು ಅಸ್ಪಶ್ಯ ಪದಕ್ಕೆ ಪರ್ಯಾಯವಾಗಿ ದಲಿತ (ಶೋಷಿತರು) ಎಂಬ ಪದ ಬಳಸಲಾಗುತ್ತಿದೆ ಹಾಗೂ ಅದು ಈಗ ಪರಿಶಿಷ್ಟ ಜಾತಿ ಪದಕ್ಕೆ ಪರ್ಯಾಪ್ತವಾಗಿ ಬಳಕೆಯಾಗುತ್ತಿದೆ.
 ಸಮಾಜ ಶಾಸ್ತ್ರಜ್ಞೆ ರೂಪಾ ವಿಶ್ವನಾಥ್ ಹೇಳುವ ಪ್ರಕಾರ, ಇದೊಂದು ತಪ್ಪಾದ ಪದ್ಧತಿಯಾಗಿದೆ. ಯಾಕೆಂದರೆ ದಲಿತ ಶಬ್ದವು ಜಾತಿಯ ಕಳಂಕದಿಂದ ಪಾರಾಗಲು ಇತರ ಧರ್ಮ ಗಳಿಗೆ ಮತಾಂತರಗೊಂಡ ಅಸ್ಪಶ್ಯರನ್ನೂ ಒಳಪಡುತ್ತದೆ (ಉದಾಹರಣೆಗೆ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡ ನನ್ನ ಗ್ರಾಮದ ಪರಯಾನ್‌ರಂತೆ), ಆದರೆ ಪರಿಶಿಷ್ಟ ಜಾತಿ ಪದವು ಹಾಗೆ ಅನ್ವಯವಾಗುವುದಿಲ್ಲ. ಹೀಗಾಗಿ ನಾನು ಗತಕಾಲದ ಬಗ್ಗೆ ಬರೆಯುವಾಗ ‘ಅಸ್ಪಶ್ಯ’ ಎಂಬ ಪದವನ್ನು ಹಾಗೂ ವರ್ತಮಾನ ಕಾಲದ ಕುರಿತು ಬರೆಯುವಾಗ ದಲಿತ ಎಂಬ ಪದವನ್ನು ಬಳಸುತ್ತೇನೆ. ಇತರ ಧರ್ಮಗಳಿಗೆ ಮತಾಂತರಗೊಂಡ ದಲಿತರ ಬಗ್ಗೆ ಬರೆಯುವಾಗ ನಾನು ದಲಿತ ಸಿಖ್ಖರು, ದಲಿತ ಮುಸ್ಲಿಮರು ಅಥವಾ ದಲಿತ ಕ್ರೈಸ್ತರು ಎಂದು ನಿರ್ದಿಷ್ಟವಾಗಿ ಹೇಳುತ್ತೇನೆ.

    ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಪ್ರಕಾರ, ಪ್ರತಿ ದಿನ 16 ನಿಮಿಷಗಳಿಗೊಮ್ಮೆ ದಲಿತನ ವಿರುದ್ಧ ದಲಿತೇತರನಿಂದ ಅಪರಾಧ ನಡೆಯುತ್ತಿದೆ. ಪ್ರತಿ ದಿನವೂ ನಾಲ್ಕಕ್ಕೂ ಅಧಿಕ ದಲಿತ ಮಹಿಳೆಯರ ಮೇಲೆ ಸವರ್ಣೀಯರಿಂದ ಅತ್ಯಾಚಾರವಾಗುತ್ತಿದೆ. ಪ್ರತಿ ವಾರ 13 ದಲಿತರ ಕಗ್ಗೊಲೆಯಾಗುತ್ತಿದೆ ಹಾಗೂ ಆರು ದಲಿತರ ಅಪಹರಣ ವಾಗುತ್ತಿದೆ. ದಿಲ್ಲಿಯಲ್ಲಿ 23 ವರ್ಷ ವಯಸ್ಸಿನ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಆಕೆಯ ಕೊಲೆಯಾದ ಘಟನೆ ನಡೆದ 2012ನೆ ಇಸವಿಯೊಂದರಲ್ಲೇ ದೇಶಾದ್ಯಂತ 1,574 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. (ದಲಿತರ ವಿರುದ್ಧ ಕೇವಲ ಶೇ.10ರಷ್ಟು ಅತ್ಯಾಚಾರ ಮತ್ತಿತರ ಅಪರಾಧಗಳು ಮಾತ್ರವೇ ವರದಿಯಾಗುತ್ತಿವೆ) ಹಾಗೂ 651 ದಲಿತರ ಕೊಲೆಯಾಗಿದೆ. ಇದು ಕೇವಲ ಅತ್ಯಾಚಾರ ಹಾಗೂ ಕಗ್ಗೊಲೆಗಳ ಪ್ರಕರಣಗಳು ಮಾತ್ರವೇ ಆಗಿವೆ. ದಲಿತರನ್ನು ವಿವಸ್ತ್ರಗೊಳಿಸುವುದು ಹಾಗೂ ಅವರನ್ನು ನಗ್ನ ಮೆರವಣಿಗೆ ಮಾಡುವುದು ಹಾಗೂ ಅವರಿಗೆ ಬಲವಂತವಾಗಿ ಅಮೇಧ್ಯವನ್ನು ತಿನ್ನಿಸುವುದು, ಅವರ ಭೂಮಿಯನ್ನು ಸ್ವಾಧೀನಪಡಿಸುವುದು, ಸಾಮಾಜಿಕ ಬಹಿಷ್ಕಾರ ಹೇರುವುದು, ಕುಡಿಯುವ ನೀರು ದೊರೆಯದಂತೆ ನಿರ್ಬಂಧ ವಿಧಿಸುವಂತಹ ಪ್ರಕರಣಗಳು ಬೇರೆಯೇ ಇವೆ. 2005ರಲ್ಲಿ ತನ್ನ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವ ಧೈರ್ಯ ಪ್ರದರ್ಶಿಸಿದ ಪಂಜಾಬ್‌ನ ಮಝಾಬಿ ದಲಿತ ಸಿಖ್ಖನಾದ ಬಿಯಾಂತ್‌ಸಿಂಗ್‌ನ ಎರಡೂ ಕೈಗಳನ್ನು ಹಾಗೂ ಕಾಲನ್ನು ಕತ್ತರಿಸಿ ಹಾಕಲಾಗಿತ್ತು. ಹೀಗೆ ಅಂಗಾಂಗಗಳು ಕತ್ತರಿಸಲ್ಪಟ್ಟ ದಲಿತರ ಬಗ್ಗೆ ಪ್ರತ್ಯೇಕ ಅಂಕಿಅಂಶಗಳನ್ನು ಇರಿಸಲಾಗಿಲ್ಲ.

ನಿಜವಾದ ಮಾತಿನಲ್ಲಿ ಹೇಳುವುದಾದರೆ ಒಂದು ವೇಳೆ ಮೂಲಭೂತ ಹಕ್ಕುಗಳನ್ನು ಸಮಾಜವು ಉಲ್ಲಂಘಿಸಿದಲ್ಲಿ ಆಗ ಅವುಗಳನ್ನುಖಾತರಿಪಡಿಸಲು ಯಾವುದೇ ಕಾನೂನು, ಸಂಸತ್ತು ಅಥವಾ ನ್ಯಾಯಾಂಗಕ್ಕೆ ಸಾಧ್ಯವಾಗದು ಎಂದು ಅಂಬೇಡ್ಕರ್ ಹೇಳುತ್ತಾರೆ. ಅಮೆರಿಕ ದಲ್ಲಿ ನೀಗ್ರೋಗಳಿಗೆ, ಜರ್ಮನಿಯಲ್ಲಿ ಯಹೂದ್ಯರಿಗೆ ಹಾಗೂ ಭಾರತದಲ್ಲಿ ಅಸ್ಪಶ್ಯ ರಿಗೆ ಮೂಲ ಭೂತ ಹಕ್ಕುಗಳಿಂದ ಯಾವ ಪ್ರಯೋಜನವಿದೆ ಎಂದು ಬುರ್ಕೆ ಪ್ರಶ್ನಿಸುತ್ತಾರೆ. ಬಹುಸಂಖ್ಯೆಯ ಜನರನ್ನು ಶಿಕ್ಷಿಸಲು ಯಾವುದೇ ಸೂತ್ರಗಳು ಪತ್ತೆಯಾಗಿಲ್ಲ.
ಭಾರತದ ಯಾವುದೇ ಹಳ್ಳಿಯ ಪೊಲೀಸ್ ಜೊತೆ ನಿನ್ನ ಕೆಲಸವೇನೆಂದು ಕೇಳಿ. ಬಹುಶಃ ಆತ ‘‘ಶಾಂತಿಯನ್ನು ಕಾಪಾಡುವುದು’’ ಎನ್ನುತ್ತಾನೆ. ಹೆಚ್ಚಿನ ಸಮಯ ಜಾತಿ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಮೂಲಕ ಅದು ನಡೆಯುತ್ತದೆ. ದಲಿತರ ಆಶೋತ್ತರಗಳ ಪ್ರಕಟನೆಯು ಶಾಂತಿಯ ಉಲ್ಲಂಘನೆಯಾಗಿದೆ.

ವರ್ಣಭೇದ, ಜನಾಂಗವಾದ, ಲಿಂಗಭೇದಭಾವ, ಆರ್ಥಿಕ ಸಾಮ್ರಾಜ್ಯಶಾಹಿವಾದ ಹಾಗೂ ಧಾರ್ಮಿಕ ಮೂಲಭೂತ ವಾದವನ್ನು ರಾಜಕೀಯವಾಗಿ ಹಾಗೂ ಬೌದ್ಧಿಕವಾಗಿ ಅಂತಾ ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶ್ನಿಸಲಾಗುತ್ತದೆ. ಮಾನವ ಸಮಾಜಕ್ಕೆ ತಿಳಿದಿರುವ ಅತ್ಯಂತ ಬರ್ಬರವಾದ ಶ್ರೇಣೀಕೃತ ಸಾಮಾಜಿಕ ಸಂಸ್ಥೆಗಳಲ್ಲೊಂದಾದ ಜಾತಿ ಪದ್ಧತಿ ಆಚರಣೆಯು, ಇದೇ ರೀತಿಯ ಪರಿಶೀಲನೆ ಹಾಗೂ ಖಂಡನೆ ಗೊಳಗಾಗುತ್ತವೆಯ�

Writer - ಅರುಂಧತಿ ರಾಯ್

contributor

Editor - ಅರುಂಧತಿ ರಾಯ್

contributor

Similar News