ಉಗ್ರರ ದಾಳಿಗೆ ಬಲಿಯಾದ ಮೇಜರ್ ಅಕ್ಷಯ್ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮನ

Update: 2016-12-01 06:52 GMT

ಬೆಂಗಳೂರು, ಡಿ.1: ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಅಕ್ಷಯ್ ಕುಮಾರ್(31) ಅವರ ಪಾರ್ಥಿವ ಶರೀರ ಗುರುವಾರ ಬೆಳಗ್ಗೆ ಯಲಹಂಕದಲ್ಲಿರುವ ಏರ್ಪೋರ್ಸ್ ಸ್ಟೇಶನ್ ಗೆ ಆಗಮಿಸಿದೆ.

ಹುತಾತ್ಮ ಅಕ್ಷಯ್ ಕುಮಾರ್ ಗೆ ಭಾರತೀಯ ಸೇನೆ ಮಿಲಿಟರಿ ಗೌರವ ಸಲ್ಲಿಸಿತು.

ನಗರದ ಯಲಹಂಕದ ಸಾದಹಳ್ಳಿ ಬಳಿಯ ಜೇಡ್ ಗಾರ್ಡನ್ ನಲ್ಲಿರುವ ಅವರ ನಿವಾಸಕ್ಕೆ  ಮಧ್ಯಾಹ್ನ 12.30ಕ್ಕೆಪಾರ್ಥಿವ ಶರೀರವನ್ನು ತರಲಾಗುವುದೆಂದು ಕುಟುಂಬಸ್ಥರು ತಿಳಿಸಿದ್ದು, ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ಮೇಜರ್ ಅಕ್ಷಯ್ ಅವರ ಅಂತ್ಯಕ್ರಿಯೆ ನಡೆಯಲಿದೆ.

ಮಂಗಳವಾರ ಮುಂಜಾನೆ ಸೇನೆಯ 16-ಕೋರ್ ವಿಭಾಗದ ಜಮ್ಮು ವಲಯದ ಕೇಂದ್ರ ಕಾರ್ಯಾಲಯಕ್ಕೆ ಸಮೀಪದಲ್ಲಿರುವ ನಗರೋಟಾ ಸೇನಾ ಘಟಕದ ಮೇಲೆ ಉಗ್ರರು ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ ಅಕ್ಷಯ್ ಸಹಿತ ಏಳು ಯೋಧರು ಹತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News